ಬಾಬಾಬುಡಾನ್ ಗಿರಿಯಲ್ಲಿ ಕರ್ತವ್ಯ ನಿರತ ಎಎಸೈ ಹೃದಯಾಘಾತದಿಂದ ಮೃತ

Spread the love

ಬಾಬಾಬುಡಾನ್ ಗಿರಿಯಲ್ಲಿ ಕರ್ತವ್ಯ ನಿರತ ಎಎಸೈ ಹೃದಯಾಘಾತದಿಂದ ಮೃತ

ಚಿಕ್ಕಮಗಳೂರು: ಬಾಬಾಬುಡಾನ್ ಗಿರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಎ ಎಸೈ ಒರ್ವರು ಮೃತಪಟ್ಟ ಘಟನೆ ಭಾನುವಾರ ಜರುಗಿದೆ.

ಮೃತರನ್ನು ಮಲ್ಲಂದೂರು ಠಾಣೆಯ ಎಎಸೈ ಜಗದೀಶ್ (58) ಎಂದು ಗುರುತಿಸಲಾಗಿದೆ.

ಚಳಿ ಹಾಗೂ ಅತಿ ಮಂಜಿನ ನಡುವೆಯೂ ಕಳೆದ ಒಂದು ವಾರದಿಂದ ಸತವಾಗಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ್ ಅವರು ಭಾನುವಾರ ಹೃದಯಾಘಾತದಿಂದ ಮೃತರಾಗಿದ್ದಾರೆ.


Spread the love