ಬಿಜೆಪಿ ಲೋಕ ಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪ್ರವಾಸ

Spread the love

ಬಿಜೆಪಿ ಲೋಕ ಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪ್ರವಾಸ

ಮಂಗಳೂರು: ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಆರನೇ ದಿನವಾದ ಸೋಮವಾರ ಮಂಗಳೂರು ದಕ್ಷಿಣ ಮಂಡಲದ ಪ್ರವಾಸವನ್ನು ಮರೋಳಿ ಶ್ರೀ ಸೂರ್ಯನಾರಾಯಣ ದೇವರ ದರ್ಶನ ಪಡೆಯುವ ಮೂಲಕ ಆರಂಭಿಸಿದರು.

ಬಳಿಕ ಅನೇಕ ಸಾಮಾಜಿಕ ಮುಂದಾಳುಗಳಿಗೆ ಪ್ರೇರಣೆ ತುಂಬಿದ ಪರಿವರ್ತನೆಯ ಹರಿಕಾರ ಸಮಾಜ ಸುಧಾರಕ ಕುದ್ಮುಲ್ ರಂಗ ರಾವ್ ಸ್ಮಾರಕಕ್ಕೆ ಭೇಟಿ ನೀಡಿದರು.

ನಂತರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ ಭಗವತಿ ದೇವಸ್ಥಾನಕ್ಕೆಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ದ.ಕ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಸಂವಾದ ನಡೆಸಿದರು.

ಬಳಿಕ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಪದವು ಸೆಂಟ್ರಲ್ ವಾರ್ಡಿನ ಬೂತ್ ಸಂಖ್ಯೆ 35 ರ ಬೂತ್ ಅಧ್ಯಕ್ಷ ಉಮೇಶ್ ಅವರ ಮನೆಗೆ ಭೇಟಿ ನೀಡಿದರು. ರಾಜೀವಿ ನಗರದ ಮತದಾರರೊಂದಿಗೆ ಸಮಾಲೋಚನೆ ನಡೆಸಿದರು.


Spread the love