ಬೀಜಾಡಿ: ಔಷದ ಶೇಖರಿಸಿಡುವ ಫ್ರಿಡ್ಜ್ ಹಸ್ತಾಂತರ

Spread the love

ಬೀಜಾಡಿ: ಔಷದ ಶೇಖರಿಸಿಡುವ ಫ್ರಿಡ್ಜ್ ಹಸ್ತಾಂತರ

ಕುಂದಾಪುರ: ಜೆಸಿಐ ಕುಂದಾಪುರ ಸಿಟಿ, ಗಿಳಿಯಾರು ಕುಶಲ್ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಇಂಡಿಯನ್ ಸಿನೀಯರ್ ಚೇಂಬರ್ ಕುಂದಾಪುರ ಲೀಜನ್, ಬೀಜಾಡಿ ಗೋಪಾಡಿ ಮಿತ್ರ ಸಂಗಮ ಆಶ್ರಯದಲ್ಲಿ ಅನಾರೋಗ್ಯ ಪೀಡಿತ ಹರೀಶ್ ಪೂಜಾರಿ ಬೀಜಾಡಿ ಇವರಿಗೆ ಔಷದ ಶೇಖರಿಸಿಡುವ ಫ್ರಿಡ್ಜ್ ಹಸ್ತಾಂತರ ಸಮಾರಂಭ ಬೀಜಾಡಿ ಮಿತ್ರಸೌಧದಲ್ಲಿ ಭಾನುವಾರ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ನಾಗೇಶ್ ನಾವಡ ವಹಿಸಿದ್ದರು. ಗಿಳಿಯಾರು ಕುಶಲ್ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ಕೋಶಾಧಿಕಾರಿ ಸ್ನೇಹ ಪಿ.ರೈ ಫ್ರಿಡ್ಜ್ ಹಸ್ತಾಂತರಿಸಿ, ಹರೀಶ್ ಪೂಜಾರಿ ಅವರ ಚಿಕಿತ್ಸೆಗೆ ಐದು ಸಾವಿರ ರೂಪಾಯಿಯ ನಗದು ನೀಡಿದರು.

ವೇದಿಕೆಯಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ರಾಷ್ಟ್ರೀಯ ನಿರ್ದೇಶಕ ಡಾ. ಅರವಿಂದ ರಾವ್ ಕೇದಿಗೆ, ಕುಂದಾಪುರ ವಿಭಾಗದ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಮೇಶ್ ದೇವಾಡಿಗ, ಜೆಸಿಐ ಇಂಡಿಯಾದ ವಲಯ 15ರ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಬೀಜಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ವಾದಿರಾಜ ಹೆಬ್ಬಾರ್, ಅಧ್ಯಕ್ಷ ಮಂಜುನಾಥ ಬೀಜಾಡಿ, ಗಿಳಿಯಾರು ಕುಶಲ್ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಯು.ಎಸ್.ಶೆಣೈ ಉಪಸ್ಥಿತರಿದ್ದರು.

ಜೆಸಿಐ ಕುಂದಾಪುರ ಸಿಟಿಯ ಕಾರ್ಯದರ್ಶಿ ಅಭಿಲಾಶ್ ಬಿ.ಎ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಪ್ರಾಸ್ತಾವಿವಾಗಿ ಮಾತನಾಡಿದರು.


Spread the love