ಬೆಂಕಿಯಿಂದ ನಾಶವಾದ ಅಂಗಡಿ ಮ್ಹಾಲಿಕನಿಗೆ ದಾನಿ ಮೂಲಕ ನೆರವು ನೀಡಿದ ಶಾಸಕ ಖಾದರ್

Spread the love

ಬೆಂಕಿಯಿಂದ ನಾಶವಾದ ಅಂಗಡಿ ಮ್ಹಾಲಿಕನಿಗೆ ದಾನಿ ಮೂಲಕ ನೆರವು ನೀಡಿದ ಶಾಸಕ ಖಾದರ್

ಮಂಗಳೂರು: ಬಂದರ್ ನಲ್ಲಿ ಇತ್ತೀಚೆಗೆ ಅಂಗಡಿಯೊಂದು ಹೊತ್ತಿ ಉರಿದಿದ್ದು, ಅಂಗಡಿಯು ಸಂಪೂರ್ಣ ಭಸ್ಮವಾಗಿತ್ತು. ಇದನ್ನು ಗಮನಿಸಿದ ಶಾಸಕರಾದ ಯು.ಟಿ ಖಾದರ್ ರವರು ನಷ್ಟದಿಂದ ಸಂಕಷ್ಟಕ್ಕೊಳಗಾದ ಆ ಕುಟುಂಬಕ್ಕೆ ದುಬೈನಲ್ಲಿ ಉದ್ಯಮಿಯಾದ ಅಲ್ತಾಫ್ ಎಂಬ ದಾನಿಯ ನೆರವಿನಿಂದ 1 ಲಕ್ಷ ರೂಪಾಯಿಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಸಂಶುದ್ದೀನ್ ಬಂದರ್, ಸಿ.ಎಂ.ಮುಸ್ತಫಾ , ಬಿ.ಎಸ್ ಇಂಮ್ತಿಯಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬಡವರ ಸೇವೆ ಮಾಡುವ ಈ ಸೇವಾ ಕಾಳಜಿಗೆ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ರವರು ಶ್ಲಾಘಿಸಿದರು.


Spread the love