ಬೆಂಗಳೂರಿನಲ್ಲಿ ಇಬ್ಬರು ರೌಡಿಶೀಟರ್​​ಗಳ ಹತ್ಯೆ

Spread the love

ಬೆಂಗಳೂರಿನಲ್ಲಿ ಇಬ್ಬರು ರೌಡಿಶೀಟರ್​​ಗಳ ಹತ್ಯೆ

ಬೆಂಗಳೂರು: ಹಳೆ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ರೌಡಿಶೀಟರ್​​ಗಳನ್ನು ಹತ್ಯೆಗೈದ ಘಟನೆ ಕೋಣನಕುಂಟೆಯ ವೀವರ್ಸ್​​ ಕಾಲನಿಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡು ಮೂಲದ ಮುರುಗನ್, ಪಳನಿ ಎಂದು ಗುರುತಿಸಲಾಗಿದೆ.

ಮುರುಗನ್ ಮತ್ತು ಬಿಟಿಎಸ್​ ಮಂಜ ಗ್ಯಾಂಗ್​ ನಡುವೆ 7 ವರ್ಷಗಳಿಂದ ದ್ವೇಷವಿತ್ತೆನ್ನಲಾಗಿದ್ದು, ಮೃತರಿಬ್ಬರು ನಿನ್ನೆ ರಾತ್ರಿ ಬಾರ್​ನಲ್ಲಿ ಮದ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಬಿಟಿಎಸ್​​ ಮಂಜ ಗ್ಯಾಂಗ್​​ನ ಸುಮಾರು 8 ಮಂದಿ ಮಾರಕಾಯುಧದಿಂದ ಹಲ್ಲೆ ನಡೆಸಿ, ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.


Spread the love