ಬೆಳ್ತಂಗಡಿಯಿಂದ ಪಾಕ್‌ಗೆ ಸೆಟಲೈಟ್ ಕರೆ: ಯಾವುದೇ ಮಾಹಿತಿ ಇಲ್ಲ : ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್

Spread the love

ಬೆಳ್ತಂಗಡಿಯಿಂದ ಪಾಕ್‌ಗೆ ಸೆಟಲೈಟ್ ಕರೆ: ಯಾವುದೇ ಮಾಹಿತಿ ಇಲ್ಲ : ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್

ಮಂಗಳೂರು: ಕಳೆದೆರಡು ದಿನಗಳಲ್ಲಿ ಕೆಲವು ಸುದ್ದಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಪಾಕಿಸ್ತಾನಕ್ಕೆ ಬೆಳ್ತಂಗಡಿಯಿಂದ ಸೆಟಲೈಟ್ ಕರೆ ಬಂದಿರುವ ಅಥವಾ ಇಲ್ಲಿಂದ ಕರೆ ಹೋಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಇದೇವೇಳೆ ರಾಷ್ರೀಯ ತನಿಖಾ ದಳವು ಬೆಳ್ತಂಗಡಿಯಿಂದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಬಗ್ಗೆಯೂ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಆ ರೀತಿ ಯಾವುದೇ ಬಂಧನ ನಡೆದಿಲ್ಲ ಎಂದವರು ಸ್ಪಷ್ಟನೆ ನೀಡಿದ್ದಾರೆ.

”ರಾಷ್ರೀಯ ತನಿಖಾ ದಳವು ಬೆಳ್ತಂಗಡಿಯಿಂದ ಓರ್ವ ವ್ಯಕ್ತಿಯನ್ನು ದಸ್ತಗಿರಿ ಮಾಡಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇಂತಹ ಯಾವುದೇ ಘಟಣೆಯು ವರದಿಯಾಗಿರುವುದಿಲ್ಲ ಹಾಗೂ ಬೆಳ್ತಂಗಡಿಯಿಂದ ಪಾಕಿಸ್ತಾಕ್ಕೆ ಕರೆ ಹೋಗಿರುವ ಅಥವಾ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ” ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟನೆಯಲ್ಲಿ ಉಲ್ಲೇಖಿಸಿದ್ದಾರೆ.


Spread the love