ಬ್ಯಾನರ್ ಹರಿದ ಪ್ರಕರಣ ಮೂವರು ಆರೋಪಿಗಳ ಬಂಧನ

Spread the love

ಬ್ಯಾನರ್ ಹರಿದ ಪ್ರಕರಣ ಮೂವರು ಆರೋಪಿಗಳ ಬಂಧನ

ಮಂಗಳೂರು: ಬಳಕುಂಜೆ ಸಮೀಪದ ಕೊಲ್ಲೂರುಪದವು ಎಂಬಲ್ಲಿ ಬ್ಯಾನರ್ ಹರಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ನಾಗರಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಎಳತ್ತೂರು ನಿವಾಸಿಗಳಾದ ಪ್ರದೀಪ್ ಕುಮಾರ್, ಪ್ರತಾಪ್ ಮತ್ತು ಮೋಹನ ಎಂದು ಗುರುತಿಸಲಾಗಿದೆ.

ಆರೋಪಿಗಳು ಕಿನ್ನಿಗೋಳಿ ಕಡೆಯಿಂದ ಮದ್ಯಸೇವಿಸಿಕೊಂಡು ಬಂದು ರಾತ್ರಿ 10 ಗಂಟೆ ವೇಳೆ ಕಿನ್ನಿಗೋಳಿ ಕಡೆಯಿಂದ ಕೊಲ್ಲುರು ಪದವುವರೆಗಿನ ಬ್ಯಾನರುಗಳನ್ನು ಹರಿದಿದ್ದು, ಇವರನ್ನು ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ. ಮುಲ್ಕಿ ಪೋಲಿಸರ ಆರೋಪಿಗಳ ವಿರುದ್ದ ತನಿಖೆ ನಡೆಸುತ್ತಿದ್ದು ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಗೆ ನಷ್ಟ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ.


Spread the love