ಬ್ರಹ್ಮಾವರ: ಡಿವೈಡರ್ ಹಾರಿ ಬಂದ ಕಾರು ರಸ್ತೆ ಬದಿ ಮಾತನಾಡುತ್ತಾ ನಿಂತ ಗೆಳೆಯರಿಗೆ ಡಿಕ್ಕಿ – ಒರ್ವ ಸಾವು

Spread the love

 ಬ್ರಹ್ಮಾವರ: ಡಿವೈಡರ್ ಹಾರಿ ಬಂದ ಕಾರು ರಸ್ತೆ ಬದಿ ಮಾತನಾಡುತ್ತಾ ನಿಂತ ಗೆಳೆಯರಿಗೆ ಡಿಕ್ಕಿ – ಒರ್ವ ಸಾವು

ಬ್ರಹ್ಮಾವರ: ರಾ. ಹೆದ್ದಾರಿ ಬದಿಯಲ್ಲಿ ತನ್ನ ಮನೆಯ ಎದುರು ಸ್ನೇಹಿತ ನೊಂದಿಗೆ ಮಾತನಾಡುತಿದ್ದ ಯುವಕನೊಬ್ಬನಿಗೆ ಅತಿವೇಗವಾಗಿ ಧಾವಿಸಿ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ನ್ನು ಹಾರಿ ಬಂದು ಢಿಕ್ಕಿಯಾಗಿ ಎದುರಿನ ಗದ್ದೆಗೆ ಬಿದ್ದ ಪರಿಣಾಮ ಯುವಕ ಮೃತಪಟ್ಟ ಘಟನೆ ಧರ್ಮಾವರಂ ಸಭಾಂಗಣದ ಎದುರಿನ ಕುಮ್ರಗೋಡು ಬಸ್ ನಿಲ್ದಾಣದ ಎದುರು ಸೋಮವಾರ ನಡೆದಿದೆ.

ಮೃತ ಯುವಕನನ್ನು ಕುಮ್ರಗೋಡಿನ ಆಕಾಶ್ ಪೂಜಾರಿ (29) ಎಂದು ಗುರುತಿಸಲಾಗಿದೆ. ಮೃತ ಯುವಕನ ಗೆಳೆಯ ಶರತ್ ಪೂಜಾರಿ ಕಾಲಿಗೆ ಪೆಟ್ಟಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ:  ಶರತ್ ಪೂಜಾರಿ ಆಕಾಶ್ ಅವರಿಂದ ರೂಮಿನ ಕೀ ತೆಗೆದುಕೊಂಡು ಹೋಗಲು ತನ್ನ ಬೈಕ್ ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಕುಮ್ರಗೋಡು ಬಸ್ಸು ನಿಲ್ದಾಣದ ಬಳಿ ಇರುವ ಆಕಾಶರವರ ಮನೆಯ ಬಳಿ ಬಂದು ಕುಂದಾಪುರ-ಉಡುಪಿ ರಾ.ಹೆ 66 ರ ಎಡ ಅಂಚಿನ ಮಣ್ಣು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್‌ನ್ನು ನಿಲ್ಲಿಸಿಕೊಂಡಿದ್ದು, ಆಗ ಆಕಾಶ್‌ರವರು ಬಂದು ರೂಮಿನ ಕೀಯನ್ನು ಕೊಟ್ಟು ಹೊರಡಬೇಕೆನ್ನುವಷ್ಟರಲ್ಲಿ ಮದ್ಯಾಹ್ನ 2:30 ಗಂಟೆಗೆ ಕುಂದಾಪುರ—ಉಡುಪಿ ತಾರು ರಸ್ತೆಯ ಇನ್ನೊಂದು ಬದಿಯ ಅಂದರೆ ಉಡುಪಿ-ಕುಂದಾಪುರ ರಾಹೆ-66 ರ ತಾರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಕಾರೊಂದು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕನ ಹತೋಟಿ ತಪ್ಪಿ ಆತನ ಬಲಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ರಸ್ತೆ ದಾಟಿ ಪಿರ್ಯಾದಿದಾರರಿದ್ದ ಮೋಟಾರ್ ಸೈಕಲ್‌ಗೆ ಹಾಗೂ ಆಕಾಶನಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ.

ಕಾರು ಡಿಕ್ಕಿ ಹೊಡೆದ ಪರಿಣಾಮ ಶರತ್ ಬೈಕ್ ಸಮೇತ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದು, ಆಕಾಶನು ಅಪಘಾತದ ರಭಸಕ್ಕೆ ರಸ್ತೆ ಬದಿಯ ಗದ್ದೆಗೆ ಹೋಗಿ ಬಿದ್ದಿದ್ದರು. ಆಕಾಶನ ತಲೆಗೆ ತೀವ್ರ ಏಟು ಬಿದ್ದಿದ್ದು, ಕೂಡಲೇ ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love