ಬ್ರಹ್ಮಾವರ: ಬಸ್ಸಿಗೆ ಸೈಡ್ ಕೊಡುವ ವಿಚಾರದಲ್ಲಿ ಕಂಡಕ್ಟರ್ ಗಳ ಹೊಡೆದಾಟ – ಪ್ರಕರಣ ದಾಖಲು

Spread the love

ಬ್ರಹ್ಮಾವರ: ಬಸ್ಸಿಗೆ ಸೈಡ್ ಕೊಡುವ ವಿಚಾರದಲ್ಲಿ ಕಂಡಕ್ಟರ್ ಗಳ ಹೊಡೆದಾಟ – ಪ್ರಕರಣ ದಾಖಲು

ಬ್ರಹ್ಮಾವರ: ಸೈಡ್ ಕೊಡುವ ವಿಚಾರದಲ್ಲಿ ಎರಡು ಖಾಸಿಗ ಬಸ್ಸಿನ ಕಂಡಕ್ಟರ್ ಗಳು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಟ ನಡೆಸಿದ ಕುರಿತು ಇಬ್ಬರ ವಿರುದ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ಸುಗಳ ನಿರ್ವಾಃಕರಾದ ಹಟ್ಟಿಯಂಗಡಿ ನಿವಾಸಿ ಮಂಜುನಾಥ (34) ಮತ್ತು ಕೋಟೇಶ್ವರ ಹಳೆಅಳಿವೆ ನಿವಾಸಿ ಸತೀಶ್ (32) ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.

ಶುಕ್ರವಾರ ಬೆಳಿಗ್ಗೆ ಬ್ರಹ್ಮಾವರ ಎಸ್ ಎಮ್ ಎಸ್ ಬಸ್ ನಿಲ್ದಾಣದಲ್ಲಿ ಬಳಿ ಬಸ್ಸಿಗೆ ಸೈಡ್ ಕೊಡುವ ವಿಚಾರದಲ್ಲಿ ಇಬ್ಬರೂ ನಿರ್ವಾಹಕರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ್ದು ಈ ಬಗ್ಗೆ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love