ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಉದ್ಘಾಟನೆ

Spread the love

ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಉದ್ಘಾಟನೆ

ಮಂಗಳೂರು:ಮಿಸ್ಫಿಫ್ ಹಾಸ್ಪಿಟಾಲಿಟಿ ಪ್ರೈ. ಲಿಮಿಟೆಡ್‍ರವರ ಬಹು ನಿರೀಕ್ಷಿತ ವಿಶೇಷ ಸಿಹಿತಿಂಡಿಗಳು ಮತ್ತು ಸವೌರಿಗಳ ಔಟ್ಲೆಟ್ ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಮಂಗಳೂರಿನ ಸಿಹಿತಿಂಡಿ, ನಮ್ಕೀನ್ ಮತ್ತು ಆಹಾರ ಪ್ರಿಯರಿಗೆ ತನ್ನ ಬಾಗಿಲು ತೆರೆಯಲು ಸಿದ್ಧವಾದಿದೆ.

ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಮಳಿಗೆ ಉದ್ಘಾಟನೆ ಮಿಸ್ಚೀಫ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯಸ್ಥೆಯಾಗಿರುವ ಕುಸುಮಾ ಭಂಡಾರಿ ಅವರ ದಿವ್ಯ ಹಸ್ತಗಳಲ್ಲಿ ದೇವೇಶ್ ಸುಧೀರ್ ಬಜಾಜ್, ವಿಜಯ್ ಬಜಾಜ್ ಅವರ ಸಮ್ಮುಖದಲ್ಲಿ ನಡೆಯಿತು. ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸಿಎ ಎಸ್. ಎಸ್. ನಾಯಕ್, ಚಾರ್ಟರ್ಡ್ ಅಕೌಂಟೆಂಟ್ ಉಪಸ್ಥಿತರಿದ್ದರು. ಮನೋಹರ ಪ್ರಸಾದ್ ಅವರು ಸಮಾರಂಭ ನಿರೂಪಿಸಿದರು ಮತ್ತು ಭಾಸ್ಕರ್ ಅರಸ ಧನ್ಯವಾದಗಳನ್ನು ವ್ಯಕ್ತಪಡಿಸಿದರು.

ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಮುಂಬೈಯ ಪಂಜಾಬಿ ಘಾಸಿತರಾಮ್ ಹಾಲ್ವಾಯಿ ಪಿ.ಜಿ.ಯ ಪ್ರಸಿದ್ಧ ಸಂಪ್ರದಾಯವನ್ನು ಮಂಗಳೂರಿಗೆ ತರುತ್ತಿದೆ. ಸಿಹಿತಿಂಡಿಗಳಲ್ಲಿ ಅವರಿಗೆ ಯಾವುದೇ ಸಾಟಿಯಿಲ್ಲ. ಅತ್ಯುನ್ನತ ಗುಣಮಟ್ಟದ ಭಾರತೀಯ ಸಾಂಪ್ರದಾಯಿಕ ಸಿಹಿತಿನಿಸುಗಳು ಮತ್ತು ಅದರ ತಯಾರಿಕೆಯ ತಜ್ಞ ಮಿಶ್ರಣಕಾರರಾಗಿರುವುದರಿಂದ, ನಮ್ಮೊಂದಿಗೆ ಅವರ ಸಹಯೋಗವು ಅತ್ಯುತ್ತಮ ವೈವಿಧ್ಯತೆ, ಉತ್ತಮ ಗುಣಮಟ್ಟ ಮತ್ತು ಅಧಿಕೃತ ಭಾರತೀಯ ರುಚಿಯನ್ನು ಖಚಿತಪಡಿಸುತ್ತದೆ.

ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲವನ್ನು ಮಂಗಳೂರುಗೆ ಸುರೇಶ್ ಭಂಡಾರಿ ಅವರು ದೇವೇಶ್ ಸುಧೀರ್ ಬಜಾಜ್ (ಸುಧೀರ್ ಬಜಾಜ್ ಅವರ ಮಗ) ಮತ್ತು ಶ್ರೀ ವಿಜಯ್ ಬಜಾಜ್ (ಸುಧೀರ್ ಬಜಜ್ ಅವರ ಸಹೋದರ ಮತ್ತು ಮುಂಬೈಯ ಪಂಜಾಬಿ ಘಾಸಿತಾರಾಮ್ ಹಾಲ್ವಾಯಿ ಪಿಜಿ ಸ್ಥಾಪಕನ ಮೊಮ್ಮಗ) ಅವರ ಜತೆಗೂಡಿ ಜಂಟಿ ಉದ್ಯಮವಾಗಿದೆ.

ನಗರದ ಕೆ ಎಸ್ ರಾವ್ ರಸ್ತೆ ಹಾಗೂ ಶರವು ದೇವಸ್ಥಾನ ರಸ್ತೆಯ ಸಮೀಪವಿರುವ ಎಕ್ಸೆಲ್ ಮಿಸ್ಚೀಫ್ ಮಾಲ್‍ನಲ್ಲಿ ಈ ಆಹಾರ ಮಳಿಗೆಗಳು ಅಕ್ಕಪಕ್ಕದಲ್ಲಿಯೇ ಕಾರ್ಯಾಚರಿಸಲಿದ್ದು ಎಲ್ಲಾ ಮೂರು ಮಳಿಗೆಗಳ ಅತ್ಯುತ್ತಮ ಖಾದ್ಯಗಳನ್ನು ಒಂದೇ ಸೂರಿನಡಿ ಸವಿಯುವ ಅವಕಾಶ ಗ್ರಾಹಕರಿಗೆ ಒದಗಿಸಲಿದೆ.

ನಗರದ ಹೃದಯ ಭಾಗದಲ್ಲಿರುವ ಕೆ.ಎಸ್. ರಾವ್ ರಸ್ತೆ ಮತ್ತು ಶಾರವು ದೇವಸ್ಥಾನ ರಸ್ತೆಯ ಸಮೀಪವಿರುವ ಎಕ್ಸೆಲ್ ಮಿಸ್ಚೀಫ್ ಮಾಲ್‍ನಲ್ಲಿ ನೆಲದ ಮಟ್ಟದಲ್ಲಿದೆ. ಈ ಹೊಸ ಔಟ್ಲೆಟ್ 5 ನೇ ಜುಲೈ ರಂದು ಉದ್ಘಾಟನೆಯಾದ ನಮ್ಮ ಇತರ ಎರಡು ಮಳಿಗೆಗಳಾದ ಮುಂಬೈ ಸ್ಟ್ರೀಟ್ ಕಿಚನ್ ಮತ್ತು ಬಾಂಬೆ ಬಾದ್ಶಾಗಳಿಗೆ ಪೂರಕವಾಗಿದೆ. ಮುಂಬೈಯ ಜನಪ್ರಿಯ ಸ್ಟ್ರೀಟ್ ಸ್ನ್ಯಾಕ್‍ಗಳಿಂದ ಹಿಡಿದು ಸಿಹಿ ತಿಂಡಿಗಳು ಹಾಗೂ ತಾಜಾ ಪೇಯಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಮಹಾನಗರಿಯ ಸ್ವಾದಿಷ್ಟ ಸವಿರುಚಿಗಳನ್ನು ಮಂಗಳೂರಿಗೆ ಪ್ರಪ್ರಥಮ ಬಾರಿಗೆ ಪರಿಚಯಿಸಲಿವೆ ಈ ಮೂರು ಆಹಾರ ಮಳಿಗೆಗಳು.

ಆಕರ್ಷಕ ಪರಿಸರ ಹಾಗೂ ಮುಂಬೈ ಮಹಾನಗರಿಯ ವಾತಾವರಣ ಮೂಡಿಸುವಂತಹ ಸುಂದರವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ ಈ ಹವಾನಿಯಂತ್ರಿತ ರೆಸ್ಟಾರೆಂಟುಗಳು. ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ವಾರದ ಎಲ್ಲಾ ಏಳು ದಿನಗಳಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 11ರ ತನಕ ತೆರೆದಿರುತ್ತದೆ.

ಭಂಡಾರೀಸ್ ಪಂಜಾಬಿ ಘಸೀಟ್‍ರಾಂ ಬಾಂಬೈವಾಲ ವಿಶೇಷ ಸಿಹಿತಿಂಡಿಗಳ ಮತ್ತು ನಮ್ಕೀನ್‍ಗಳ ಲೌಂಜ್ ಆಗಿದ್ದು ವಿಶ್ವವಿಖ್ಯಾತ ಮುಂಬೈ ಶೈಲಿಯ ಸವಿರುಚಿಗಳು ಇಲ್ಲಿ ಲಭ್ಯವಿವೆ. ಪಂಜಾಬಿ ಮತ್ತು ಉತ್ತರ ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಗಳು, ಶುದ್ಧ ಹಾಲು ಹಾಗೂ ತುಪ್ಪದಿಂದ ತಯಾರಿಸಲ್ಪಟ್ಟ ಸ್ವಾದಿಷ್ಟ ಲಡ್ಡು, ಪೇಡಾ, ಹಲ್ವ ಹೊರತಾಗಿ ಒಣ ಹಣ್ಣುಗಳು ಮತ್ತು ವಿವಿಧ ನಾಮ್ಕಿನ್ಗಳು ಕೂಡ ಇಲ್ಲಿ ದೊರೆಯಲಿವೆ. ನಾವು ನಮ್ಮ ಮೆನುವಿನಲ್ಲಿ 200 ಕ್ಕೂ ಅಧಿಕ ಸಿಹಿತಿಂಡಿಗಳು, ತಿಂಡಿಗಳು ಮತ್ತು ನಾಮ್ಕಿನ್ ಖಾದ್ಯಗಳನ್ನು ಒದಗಿಸುತ್ತೇವೆ, ಇವುಗಳಲ್ಲಿ ಹೆಚ್ಚಿನವು ಮಂಗಳೂರಿಗೆ ಮೊದಲ ಬಾರಿಗೆ ತರಲಾಗುತ್ತಿದೆ.

“ಶುದ್ಧ, ಸ್ವಾದಿಷ್ಟ, ಅತ್ಯುತ್ತಮ ಗುಣಮಟ್ಟದ ಟೇಸ್ಟಿ ಸಿಹಿ ತಿಂಡಿ, ನ್ಯಾಮ್ಕೆನ್ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮತ್ತು ಸೂಕ್ತ ಸಮಯದಲ್ಲಿ ಉತ್ತಮ ಸೇವೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಮೂಲಕ ಒಟ್ಟು ಗ್ರಾಹಕರಿಗೆ ತೃಪ್ತಿಗೋಳಿಸುವುದ ನಮ್ಮ ಗುರಿಯಾಗಿ ಎನ್ನುತ್ತಾರೆ ಈ ಸಂಸ್ಥೆಯ ಪ್ರವರ್ತಕರಾದ ಶ್ರೀ. ಸುರೇಶ್ ಭಂಡಾರಿ.

ಆಹಾರೋದ್ಯಮದಲ್ಲಿ ಅತೀವ ಆಸಕ್ತಿ ಹೊಂದಿರುವ ಯುವ ಉದ್ಯಮಿ ಶ್ರೀ. ಸುರೇಶ್ ಭಂಡಾರಿಯವರ ಮುಂದಾಳತ್ವದ ಸಂಸ್ಥೆ ಮಿಸ್ಚೀಫ್ ಹಾಸ್ಪಿಟಾಲಿಟಿ ಆಗಿದೆ. ಮಂಗಳೂರಿನ ಅತ್ಯಂತ ಅಗ್ರಗಣ್ಯ ರೆಸ್ಟಾರೆಂಟ್ ‘ಪಂಜಾಬ್ ದಾ ಪಿಂಡ್’ ಇದರ ಪ್ರವರ್ತಕರೂ ಆಗಿದ್ದಾರೆ ಸುರೇಶ್ ಭಂಡಾರಿ.


Spread the love