ಭ್ರಷ್ಟಾಚಾರ, ಶೋಕಿಗಾಗಿ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ -ವೇದವ್ಯಾಸ ಕಾಮತ್

Spread the love

ಭ್ರಷ್ಟಾಚಾರ, ಶೋಕಿಗಾಗಿ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ -ವೇದವ್ಯಾಸ ಕಾಮತ್

ಮಂಗಳೂರು : ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಬಾಂಬ್ ನಾಗನ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಕೋಟ್ಯಾಂತರ ರೂಪಾಯಿ ಕಪ್ಪು ಹಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ ಸಹಾಯಕ ಮಂಜುನಾಥ ಹಾಗೂ ಕೆಲವು ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು ಎಂದು ಪತ್ತೆಯಾಗಿರುವುದು ಮತ್ತು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಶಾಸಕ, ಮಾಜಿ ಸಚಿವ ಅಂಬರೀಶ್ ಮಾಧ್ಯಮದೆದುರು ಅಸಭ್ಯವಾಗಿ ವರ್ತಿಸಿದ್ದು ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗ, ತನ್ನ ಬಳಿ ಸಿಕ್ಕಿದ ಹಣ ತನಗೆ ಸಿಎಂ ಆಪ್ತ ನಾಗರಾಜ್ ಕೊಟ್ಟಿದ್ದು ಎಂದಿದ್ದಾನೆ. ಸಿಎಂ ಆಪ್ತರ ಬಳಿ ಅಷ್ಟು ಹಣ ಬರಲು ಹೇಗೆ ಸಾಧ್ಯ, ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ. ಸಿಎಂ ಉಪಸ್ಥಿತರಿರುವಾಗ ಕಾಂಗ್ರೆಸ್ಸಿನ ಶಾಸಕ, ಮಾಜಿ ಸಚಿವ ಅಂಬರೀಶ್ ಅಸಹ್ಯವಾಗಿ ಮಾಧ್ಯಮದವರನ್ನು ಸಾರ್ವಜನಿಕವಾಗಿ ನಿಂದಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದು ಪತ್ರಕರ್ತರನ್ನು ಕಾಂಗ್ರೆಸ್ಸಿನ ರಾಜಕಾರಣಿಗಳು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ತೋರಿಸುತ್ತದೆ. ಆ ದೃಶ್ಯಗಳನ್ನು ನೋಡುವಾಗ ಇವರು ಅಧಿಕಾರದಲ್ಲಿರುವುದು ಶೋಕಿಗಾಗಿ ಎನ್ನುವುದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love