ಮಂಗಳೂರಿನ ತಣ್ಣೀರುಬಾವಿಯಲ್ಲಿ ಮತ್ತೊಂದು ಕೊಲೆ

Spread the love

ಮಂಗಳೂರಿನ ತಣ್ಣೀರುಬಾವಿಯಲ್ಲಿ ಮತ್ತೊಂದು ಕೊಲೆ

ಮಂಗಳೂರು: ಮಲಗಿದ್ದ ವ್ಯಕ್ತಿಯೋರ್ವನನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಸೋಮವಾರ ಮುಂಜಾನೆ ಪಣಂಬೂರು ಸಮೀಪದ ತಣ್ಣಿರುಬಾವಿಯಲ್ಲಿ

ಮೃತ ಯುವಕನನ್ನು ಬೆಂಗರೆ ನಿವಾಸಿ ಶಿವರಾಜ್ (45) ಎಂದು ಗುರುತಿಸಲಾಗಿದೆ. ಈತ ಮೆಂಡನ್ ಗ್ಯಾಂಗ್‌ನ ರೌಡಿಶೀಟರ್ ಭರತೇಶ್ ಎಂಬವರ ಸಹೋದರ ಎನ್ನಲಾಗಿದೆ. ಮುಂಜಾನೆ 4.30ರಿಂದ 5.30ರ ವೇಳೆ ಈ ಕೃತ್ಯ ನಡೆದಿದ್ದು, ಶಿವರಾಜ್ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಸಂದರ್ಭ ದುಷ್ಕರ್ಮಿಗಳ ತಂಡವೊಂದು ಕೊಲೆ ಮಾಡಿದೆ.

ಮೇಲ್ನೋಟಕ್ಕೆ ಹಳೆಯ ದ್ವೇಷ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ತಿಳಿದು ಬಂದಿದೆ. ಪಣಂಬೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.


Spread the love