ಮಂಗಳೂರಿನ ಧರ್ಮಾಧ್ಯಕ್ಷರಾಗಿ ಎರಡು ವರ್ಷಗಳನ್ನು ಪೂರೈಸಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

Spread the love

ಮಂಗಳೂರಿನ ಧರ್ಮಾಧ್ಯಕ್ಷರಾಗಿ ಎರಡು ವರ್ಷಗಳನ್ನು ಪೂರೈಸಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು: ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು, ತಮ್ಮ ಧರ್ಮಾದ್ಯಕ್ಷರ ದೀಕ್ಷೆಯ ಎರಡನೇ ವರ್ಷದ ಸಂಭ್ರಮವನ್ನು, ಸಪ್ಟೆಂಬರ್ 15,   ರಂದು, ಬಿಷಪರ ನಿವಾಸದ ದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸುವುದರ ಮೂಲಕ, ಸರಳವಾಗಿ ಆಚರಣೆ ಮಾಡಿದರು.

ಬಲಿಪೂಜೆಯಲ್ಲಿ, ಬಿಷಪರ ಸಲಹಾದಾರರಾದ ಧರ್ಮಗುರುಗಳಿಗೆ ಮತ್ತು ಬಿಷಪರ ನಿವಾಸದ ಧರ್ಮಗುರುಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಈ ದಿನವು ಬಿಷಪರ ದೇವಾಲಯದ ವಾರ್ಷಿಕ ಹಬ್ಬವು ಆಗಿದ್ದು ಕೆಲವು ಭಕ್ತರು ಮಾತ್ರ ಬಲಿಪೂಜೆಯಲ್ಲಿ ಭಾಗವಹಿಸಿದರು.

ಬಿಷಪರು ತಮ್ಮ ಪ್ರವಚನದಲ್ಲಿ ದುಃಖಿತ ಮಾತೆಯ ವಿಶೇಷ ನೋವುಗಳ ಬಗ್ಗೆ ವಿವರಣೆ ನೀಡಿದರು ಹಾಗೂ ಎಲ್ಲ ಭಕ್ತರು ಅವರಂತೆಯೆ ತಮ್ಮ ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ಧೈರ್ಯವಾಗಿ ಎದುರಿಸಬೇಕೆಂದು ಸಂದೇಶ ನೀಡಿದರು.

ಪೂಜೆಯ ನಂತರ, ನಿವೃತ್ತ ಧರ್ಮಾಕ್ಷರಾದ ಅ|ವಂ|ಡಾ|ಅಲೋಷಿಯಸ್ ಪಾವ್ಲ್ ಡಿಸೋಜರವರು, ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರನ್ನು ಹೂ ಗುಚ್ಚಾ ನೀಡಿ ಅಭಿನಂದಿಸಿದರು. ಶ್ರೇಷ್ಟಗುರು ಮೊನ್ಸಿಜೋರ್ ಮ್ಯಾಕ್ಸಿಮ್ ನೊರೊನ್ಹಾರವರು ಬಿಷಪರನ್ನು ಅಭಿನಂದಿಸಿ ಅವರ ಮುಂದಿನ ಯೋಜನೆಗಳಿಗೆ ಶುಭಕೋರಿದರು. ದೇವಾಲಯದ ಮೆಲ್ವಿಚಾರಕಾರಾದ ವಂ.ಸ್ವಾಮಿ ವಿಕ್ಟರ್ ವಿಜಯ್ ಲೋಬೊ ಸರ್ವರನ್ನು ವಂದಿಸಿದರು.


Spread the love