ಮಂಗಳೂರು : ಅ.14 ರಿಂದ 20 ರವರೆಗೆ ನಾಟಕ ಪರ್ಬ

Spread the love

ಮಂಗಳೂರು : ಅ.14 ರಿಂದ 20 ರವರೆಗೆ ನಾಟಕ ಪರ್ಬ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇವರ ಸಹಕಾರದಿಂದ ಅಕ್ಟೋಬರ್ 14 ರಿಂದ 20 ವರೆಗೆ ಪ್ರತಿದಿನ ಸಂಜೆ 4.30 ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ತುಳು ನಾಟಕ ಪರ್ಬ ವನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 14 ರಂದು ಲೀಲಾವತಿ ಪೆÇಸಲಾಯಿ ಸಾರಥ್ಯ ಸಿಂಧೂರ ಕಲಾವಿದರು ಕಾರ್ಲ ಇವರ ‘ಪನೊಡಿತ್ತ್‍ಂಡ್ ಸಾರಿ’, ಅಕ್ಟೋಬರ್ 15 ರಂದು ರಮೇಶ್ ಎಮ್. ಸಂಗಮ ಕಲಾವಿದರು ಉಜಿರೆ ಇವರ ‘ತೂಯೆರೆ ಬರ್ಪೆರ್’, ಅಕ್ಟೋಬರ್ 16 ರಂದು ಶ್ರೀನಿವಾಸ್ ಕುಲಾಲ್ ಚಾರ್ಮಾಡಿ ಪಂಚಶ್ರೀ ಕಲಾವಿದರು ಚಾರ್ಮಾಡಿ ಇವರ ‘ಏತುಂಡ ಆತೆ’, ಅಕ್ಟೋಬರ್ 17 ರಂದು ಅನ್ನಪೂರ್ಣೇಶ್ವರಿ ಕಲಾತಂಡ ಇಂಚರ ಇವರ ‘ಮದಿಮಾಲ್’, ಅಕ್ಟೋಬರ್ 18 ರಂದು ಶರತ್ ಆಳ್ವ ಕೂರೇಲು ಬೊಳ್ಳು ಬೊಲ್ಪು ಕಲಾವಿದರು ಪುತ್ತೂರು ಇವರ ‘ಕಾಸ್‍ದ ಕಸರತ್ತ್’, ಅಕ್ಟೋಬರ್ 19 ರಂದು ಪುರಲ್ದಪ್ಪೆನ ಮೋಕೆದ ಕಲಾವಿದರು ಪೆÇಳಲಿ ಇವರ ‘ಈ ಪನ್ಪನ ಯಾನ್ ಪನೊಡ’, ಅಕ್ಟೋಬರ್ 20 ರಂದು ಕಲಾ ಸವ್ಯಸಾಚಿ ಪ್ರಶಾಂತ್ ಸಿ ಕೆ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಇವರ ‘ಸತ್ಯೊದ ಬಿರುವೆರ್’ ನಾಟಕ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮವು ನಮ್ಮ ಟಿ.ವಿ, ಫೇಸ್‍ಬುಕ್‍ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್. ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love