ಮಂಗಳೂರು: ಕೊಂಕಣಿ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ಗಜಾನನ ಮಹಾಲೆ ನಿಧನ

Spread the love

ಮಂಗಳೂರು: 2014 ನೇ ಸಾಲಿನ ಕೊಂಕಣಿ ಅಕಾಡೆಮಿಯ ಜನಪದ ಗೌರವ ಪ್ರಶಸ್ತಿ ಪಡೆದ ಪ್ರಸಾದನ ಕಲಾವಿದ ಗಜಾನನ ಮಹಾಲೆ, ಧಾರವಾಡ ಇವರು (84) ಇಂದು ನಿಧನರಾದರು.

Gajanana Mahale Mahale award

ಶ್ರೀಯುತರು ನೃತ್ಯ, ನಾಟಕ, ಚಲನಚಿತ್ರ ಮತ್ತು ಇತರ ಸಮಾರಂಭಗಳಲ್ಲಿ ಪ್ರಸಾದನ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮನ್ನು ನಾಟಕ ಮತ್ತು ನೃತ್ಯ ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ಬೇಂದ್ರೆ ಹಾಗೂ ಶ್ರೀರಂಗ ಇವರ ನಾಟಕಗಳು ಸೇರಿ ನೂರಾರು ನಾಟಕಗಳಿಗೆ ಪ್ರಸಾದನ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನಾಟಕ ನಟನಾಗಿ ಕೂಡ ಪರಿಚಯಿಸಿಕೊಂಡ ಇವರು ನಿರ್ದೇಶಕರಾದ ಸುರೇಶ್ ಹೆಬ್ಳಿಕರ್ ಇವರ ನಿರ್ದೇಶನದಲ್ಲಿ `ಚಮತ್ಕಾರ’ ಹಾಗೂ ಟಿ.ಎಸ್.ನಾಗಾಭರಣ ಇವರ `ಸಿಂಗಾರೇವ್ವ’ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸಾದನ ಕಲೆಗೆ ಜಾನಪದೀಯ ಮೆರಗು ನೀಡಿ ಹೆಸರುವಾಸಿಗೊಳಿಸಿರುವ  ಮಹಾಲೆ ಇವರ ಸೇವೆಯನ್ನು ಪರಿಗಣಿಸಿ, 2014ನೇ ಸಾಲಿನ ಕೊಂಕಣಿ ಅಕಾಡೆಮಿಯ ಜಾನಪದ ಪ್ರಶಸ್ತಿಯನ್ನು ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿ ಗೌರವಿಸಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಹಾಗೂ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಅವರು ಮಹಾಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


Spread the love