ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ

Spread the love

ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ

ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅವರು ಅಧಿಕಾರ ಸ್ವೀಕಾರ ಮಾಡಿದರು.

ನಂತರ ಮಾತನಾಡಿದ ಅವರು ಮಂಗಳೂರು ಆಯುಕ್ತರಾಗಿರುವುದು ಖುಷಿ ವಿಚಾರ. ದ.ಕ. ಜಿಲ್ಲೆಯ ಜನತೆ ಕಾನೂನು ಮೀರುವವರಲ್ಲ. ಅಧಿಕಾರವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸುವೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕಾಳಜಿ ವಹಿಸುವುದಾಗಿ ಹೇಳಿದರು.

ಜನಸಂಖ್ಯೆಗೆ ಅನುಗುಣ ಪೊಲೀಸರಿಲ್ಲ, ನಾವು ಶಕ್ತಿ ಮೀರಿ ಜನರ ರಕ್ಷಣೆ ಮುಂದಾಗುತ್ತೇವೆ. ಜನಪರ ಸೇವೆಗಾಗಿ ತಂಡದ ಪರವಾಗಿ ನಿಲ್ಲುತ್ತೇವೆ. ಜನಪ್ರತಿನಿಧಿ, ಸಮುದಾಯಗಳ ನಾಯಕರ, ಜನರ ಸಹಕಾರ ಕೇಳುವೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ತರುತ್ತೇವೆ ಎಂದು ಹೇಳಿದರು.

ಈ ಸಂದರ್ಭ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿಗಳಾದ ಶ್ರೀನಿವಾಸ ಗೌಡ, ಕೋದಂಡರಾಮ, ವಿನಯ ಗಾಂವ್ಕರ್, ಭಾಸ್ಕರ್ ಒಕ್ಕಲಿಗ, ಮಂಜುನಾಥ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.


Spread the love