ಮಂಗಳೂರು ವಿ.ವಿ.ಯ   ಕುಲಪತಿಗಳಿಗೆ ಚಾಣಕ್ಯ ಪ್ರಶಸ್ತಿ

Spread the love

ಮಂಗಳೂರು ವಿ.ವಿ.ಯ   ಕುಲಪತಿಗಳಿಗೆ ಚಾಣಕ್ಯ ಪ್ರಶಸ್ತಿ

ಮಂಗಳೂರು: ಇತ್ತೀಚೆಗೆ ನಡೆದ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾದ 14 ನೇ ಜಾಗತಿಕ ಸಂವಹನ ಸಮಾವೇಶದಲ್ಲಿ, ಮಂಗಳೂರು ವಿ.ವಿ.ಯ   ಕುಲಪತಿಗಳಾದ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರಿಗೆ ಆಡಳಿತ ಮತ್ತು ಶೈಕ್ಷಣಿಕ ವಲಯದ ಜೀವಮಾನದ ಸಾಧನೆಗಾಗಿ ಕೊಡಮಾಡುವ 11 ನೇ ಚಾಣಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ಶೈಕ್ಷಣಿಕ ವಲಯದ ಜೀವಮಾನದ ಸಾಧನೆಗಾಗಿ ಡಾ. ಆರ್. ಸುದರ್ಶನ್ ಸ್ಮರಣಾರ್ಥ ಸ್ಥಾಪಿಸಲಾದ ಚಾಣಕ್ಯ ಪ್ರಶಸ್ತಿಯ 11 ನೇ ಆವೃತ್ತಿಯನ್ನು, ಬೆಂಗಳೂರಿನ ಗಾಂಧಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿಯು ಆಯೋಜಿಸಿದ್ದ 14 ನೇ ಜಾಗತಿಕ ಸಂವಹನ ಸಮಾವೇಶದಲ್ಲಿ ಶ್ರೀಯತರಿಗೆ ಪ್ರಸ್ತಾಪಿತ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.


Spread the love