ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ

Spread the love

ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ

ಉಡುಪಿ: ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ಡಿಸೆಂಬರ್ 26 ರಂದು ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸೀಸ್ ರವರನ್ನು ಭೇಟಿಯಾಗಿ ತನ್ನ ಅಧಿಕಾರವಧಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರಿಗೆ ಪಾರದರ್ಶಕವಾಗಿ ನೀಡಲಾಗಿರುವ ಎಲ್ಲಾ ಪರವಾನಿಗೆದಾರರ ಪರವಾನಿಗೆಗಳನ್ನು ಮುಂದುವರಿಸಬೇಕು ಮತ್ತು ಹೊಸ ಪರವಾನಿಗೆ ಮಂಜೂರು ಮಾಡುವಾಗ ಇತರರನ್ನು ಪರಿಗಣಿಸುವಾಗ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವ ದಲಿತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

ಈ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಜನರ ಹಿತದೃಷ್ಟಿಯಿಂದ “ಉಡುಪಿ ಜಿಲ್ಲೆಯ ಮರಳು ಉಡುಪಿ ಜಿಲ್ಲೆಗೆ” ಎಂದು ಹೊರಡಿಸಿರುವ ಆದೇಶವನ್ನು ಮುಂದುವರಿಸಿ ಉಡುಪಿ ಜಿಲ್ಲೆಯ ಜನರಿಗೆ ಅತೀ ಕಡಿಮೆ ಬೆಲೆಗೆ ಮರಳು ಸಿಗುವಂತೆ ಮಾಡಬೇಕು, ಮರಳು ಸಮಸ್ಯೆಯ ಗೊಂದಲಗಳನ್ನು ಮತ್ತು ಸಿ.ಆರ್.ಝಡ್ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಗಣಿ ಸಚಿವರಾದ ರಾಜಶೇಖರ ಪಾಟೀಲರವರನ್ನು ಭೇಟಿಯಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ಬಗ್ಗೆ ಮತ್ತೊಮ್ಮೆ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅದ್ಯಕ್ಷರು, ಸರ್ವ ಸದಸ್ಯರುಗಳು ಹಾಗು ದಲಿತ ಮುಖಂಡರುಗಳು ಉಪಸ್ಥಿತರಿದ್ದರು.


Spread the love