ಮಾತೃಭಾಷೆಯ ಸೇವೆ ಮಾಡುವುದು ಕರ್ತವ್ಯ–ವಸಂತ ಶೆಟ್ಟಿ ಬೆಳ್ಳಾರೆ

Spread the love

ಮಾತೃಭಾಷೆಯ ಸೇವೆ ಮಾಡುವುದು ಕರ್ತವ್ಯ–ವಸಂತ ಶೆಟ್ಟಿ ಬೆಳ್ಳಾರೆ

ದೆಹಲಿ: ಒಂದು ಭಾಷೆ, ಸಾಹಿತ್ಯ ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಇವು ಹರಿವ ನೀರಿನಂತೆ ಚಲನಶೀಲವಾದುದು. ಈ ನೆಲೆಯಲ್ಲಿ ತುಳು-ಕೊಂಕಣಿ ಭಾಷೆಗಳು ಕೂಡ ಸಾಗಿವೆ. ಹೊರನಾಡಿನಲ್ಲಿದ್ದುಕೊಂಡು ನಾವು ನಮ್ಮ ಮಾತೃಭಾಷೆಯ ಸೇವೆ ಮಾಡುವುದು ನಮ್ಮ ಕರ್ತವ್ಯ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ, ವೈವಿಧ್ಯಮಯ ಸಂಸ್ಕøತಿಯನ್ನು ಬಿಂಬಿಸುವ ‘ತುಳು-ಕೊಂಕಣಿ ಸಂಭ್ರಮ’ದಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಪ್ರಯತ್ನವನ್ನುದೆಹಲಿ ಕರ್ನಾಟಕ ಸಂಘ ನಿರಂತರವಾಗಿ ಮಾಡುತ್ತಾ ಬರುತ್ತಿದೆ” ಎಂದು‘ತುಳು-ಕೊಂಕಣಿ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ನುಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸರಕಾರದ ಕೃಷಿ ಸಚಿವಾಲಯದ ಉಪ ನಿರ್ದೇಶಕರಾದ ಶ್ರೀ ಪ್ರಸನ್ನ ಸಾಲಿಯಾನ್ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅರವಿಂದ ಬಿಜೈ ಅವರ ‘ತುಳು ಸಿನಿಮಾ–ಒಂದು ಅಧ್ಯಯನ’ ಕೃತಿಯನ್ನು ಬಿಡುಗಡೆಗೊಳಿಸಿ “ಪ್ರಸ್ತುತ ಕಾಲಘಟ್ಟದಲ್ಲಿ ತುಳು ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. ಕಲೆ ಹಾಗೂ ಮಾಧ್ಯಮವಾದ ಸಿನಿಮಾದ ಕುರಿತಾದ ಅಧ್ಯಯನ ಅಗತ್ಯವಾಗಿದೆ. ಇಂತಹ ಕಾರ್ಯವನ್ನು ದೆಹಲಿ ಕನ್ನಡ ಶಾಲೆಯ ಕನ್ನಡ ಶಿಕ್ಷಕರಾದ ಅರವಿಂದ ಬಿಜೈ ಅವರು ಮಾಡಿದ್ದಾರೆ. ಯುವಜನತೆಯಿಂದ ನಮ್ಮಕಲೆ, ಸಂಸ್ಕøತಿ, ಪರಂಪರೆಯ ಕುರಿತಾಗಿ ಇನ್ನಷ್ಟು ಅಧ್ಯಯನಾತ್ಮಕ ಬರಹಗಳು ಪ್ರಕಟವಾಗಲಿ”ಎಂದು ಶುಭ ಹಾರೈಸಿದರು.

ಕರ್ನಾಟಕ ವಿಶ್ವವಿದ್ಯಾಲಯದಕಾಲೇಜೇಟ್‍ಎಜ್ಯುಕೇಶನ್, ದಾಂಡೇಲಿ ಇದರ ನಿವೃತ್ತ ಪ್ರಾಂಶುಪಾಲರಾದ ಎ. ಕೆ. ಶಣ್ವಿ, ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ನಿರ್ದೇಶಕಿಯಾದ ಶಾರದಾ ಮಣಿಶೇಖರ್‍ಅತಿಥಿಯಾಗಿ ಭಾಗವಹಿಸಿದ್ದರು. ಕೃತಿಕಾರರಾದ ಶ್ರೀ ಅರವಿಂದ ಬಿಜೈಅವರು ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ಬಳಿಕ ಶ್ರೀ ಮಿಥುನ್ ಶೆಟ್ಟಿ ನೇತೃತ್ವದಲ್ಲಿ‘ಗ್ಲಾಡಿಯೇಟರ್ಸ್’ ಕಾಪು ತಂಡದಿಂದ ಅವಿನಾಶ್‍ ಅವರ ನಿರ್ದೇಶನದಲ್ಲಿ ‘ತುಳು-ಕೊಂಕಣಿ ಸಂಸ್ಕøತಿ’ ಬಿಂಬಿತವಾದ ವೈವಿಧ್ಯಮಯ ನೃತ್ಯಕಾರ್ಯಕ್ರಮ ನೆರೆದವರ ಮನಸೆಳೆಯಿತು. ತುಳು ರಸಪ್ರಶ್ನೆ ಹಾಗೂ ಇನ್ನಿತರ ಆಕರ್ಷಕ ಸ್ಪರ್ಧೆಗಳು ಸಭಿಕರನ್ನು ರಂಜಿಸಿದವು. ಕೆನರಾಕಲ್ಚರಲ್ ಸೊಸೈಟಿಯ ಸದಸ್ಯರುಕೊಂಕಣಿ ಹಾಡುಗಳನ್ನು ಜೊತೆಗೆ ಸ್ಥಳೀಯ ಕಲಾವಿದರಾದ ಶ್ರೀಮತಿ ಪೂಜಾ ಪಿ.ರಾವ್, ಶ್ರೀ ಅರವಿಂದ ಬಿಜೈ ಹಾಗೂ ಶ್ರೀ ಶ್ರೇಯಸ್‍ಅವರು ತುಳು ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶೀ ಸಿ.ಎಂ.ನಾಗರಾಜಅವರು ವಂದಿಸಿದರು.ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶ್ರೀ ಸಖಾರಾಮಉಪ್ಪೂರು ಹಾಗೂ ಶ್ರೀಮತಿ ಪೂಜಾ ಪಿ.ರಾವ್‍ಅವರುಕಾರ್ಯಕ್ರಮ ನಿರೂಪಿಸಿದರು.


Spread the love