ಮುತ್ತಿಗೆ ಪ್ರಕರಣ; ದ್ವೇಷ ರಾಜಕಾರಣ ನನಗೆ ಗೊತ್ತಿಲ್ಲ – ಸಚಿವೆ ಡಾ| ಜಯಮಾಲಾ

Spread the love

ಮುತ್ತಿಗೆ ಪ್ರಕರಣ; ದ್ವೇಷ ರಾಜಕಾರಣ ನನಗೆ ಗೊತ್ತಿಲ್ಲ – ಸಚಿವೆ ಡಾ| ಜಯಮಾಲಾ

ಉಡುಪಿ: ದ್ವೇಷ ರಾಜಕಾರಣದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ ನಾನು ಪಕ್ಷದ ಮೇಲೆ ಗೌರವ ಇಟ್ಟಕೊಂಡಿದ್ದು ಜನರ ಮೇಲೆ ನಂಬಿಕೆ ಕಾಳಜಿ ಇದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತನ್ನ ಸ್ವಂತ ಪಕ್ಷದ ಕಾರ್ಯಕರ್ತರಿಂದ ಮುತ್ತಿಗೆ ಹಾಕಿಸಿಕೊಂಡು ಮುಜುಗರಕ್ಕೀಡಾದ ಸಚಿವೆ ಜಯಮಾಲರನ್ನು ಪತ್ರಕರ್ತರು ಪ್ರಶ್ನಿಸಿದಾಗ ಇದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಇದನ್ನೆಲ್ಲಾ ಯಾರು ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಹಾಗೆ ಮಾಡಿದವರಿಗೆ ದೇವರು ಒಳ್ಳೆಯದನ್ನು ಮಾಡಲಿ. ನನಗೆ ಕೂಡಿ ಬಾಳುವುದರಲ್ಲಿ ಮಾತ್ರ ನಂಬಿಕೆ. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಸರಕಾರ ನೀಡಿದ ಜವಾಬ್ದಾರಿಯನ್ನು ಮಾಡುವುದು ನನ್ನ ಕರ್ತವ್ಯ ಆ ನಿಟ್ಟಿನಲ್ಲಿ ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಇದಕ್ಕಿಂತ ಹೆಚ್ಚು ನಾನೇನು ಹೇಳುವುದಿಲ್ಲ.

ಪಕ್ಷ ಕಟ್ಟಲು ನಮ್ಮ ಕಾರ್ಯಕರ್ತರು ಎಷ್ಟೊಂದು ಕಷ್ಟಪಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಹಾಗೂ ಅವರ ಮೇಲೆ ಗೌರವ ಕೂಡ ಇದೆ. ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎರಡೆರಡು ಜವಾಬ್ದಾರಿ ಇದೆ. ನಾನು ಬೆಂಗಳೂರಿನಲ್ಲಿದ್ದರೂ ಕೂಡ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನು ಮಾಡುವುದರಲ್ಲಿ ಹಿಂದೇಟು ಹಾಕಿಲ್ಲ. ಉಡುಪಿ ಜಿಲ್ಲೆಯ ಅಭಿವೃದ್ಧಿ, ಶಾಂತಿ ಸುವ್ಯವಸ್ಥೆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.


Spread the love