ಯಡ್ಯೂರಪ್ಪ ಮಂಡಿಸಿದ್ದು ಸ್ಪಷ್ಟತೆಯಿಲ್ಲದ ಬಜೆಟ್ – ಅಶೋಕ್ ಕುಮಾರ್ ಕೊಡವೂರು

Spread the love

ಯಡ್ಯೂರಪ್ಪ ಮಂಡಿಸಿದ್ದು ಸ್ಪಷ್ಟತೆಯಿಲ್ಲದ ಬಜೆಟ್ – ಅಶೋಕ್ ಕುಮಾರ್ ಕೊಡವೂರು

ಉಡುಪಿ: ಮುಖ್ಯಮಂತ್ರಿ ಯಡ್ಯೂರಪ್ಪನವರು ಗುರುವಾರ ಮಂಡಿಸಿದ ಬಜೆಟ್ ಯಾವುದೇ ರೀತಿಯ ಆಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಗಳು ಮಂಡಿಸಿದ ಬಜೆಟಿನಲ್ಲಿ ಯೋಜನೆ ಅನುಷ್ಠಾನಗಳಿಗಾಗಿ ವಿಂಗಡಿಸಿದ ಅನುದಾನದ ಬಗ್ಗೆ ಸ್ಪಷ್ಟತೆಯಿಲ್ಲ. ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಬದಲಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಕೃಷಿ ಉತ್ಪನ್ನ ದ್ವಿಗುಣಗೊಳ್ಳಲು ಯಾವುದೇ ಯೋಜನೆ ರೂಪಿಸಿಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಜೀವನ ಚೈತ್ರ ಯಾತ್ರೆ ಯೋಜನೆ ಹಮ್ಮಿಕೊಂಡಿರುವುದು ಬಡವರಿಗೆ ಅನುಕೂಲವಾದರೂ ವಯಸ್ಸನ್ನು ನಿಗದಿಪಡಿಸಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಅವರು ತಿಳಿಸಿದ್ದಾರೆ..


Spread the love