ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 39ನೇ ಶ್ರಮದಾನವನ್ನು ಏರಪೆÇೀರ್ಟ್ ರಸ್ತೆ, ಬೋಂದೆಲ್‍ನಲ್ಲಿ ಆಯೋಜನೆ ಮಾಡಲಾಯಿತು. 8-7-2018, ಆದಿತ್ಯವಾರ ಬೆಳಿಗ್ಗೆÉ 7:30ಕ್ಕೆ ಡಾ. ಹರೀಶ್ ಜೋಶಿ, ವಿಶ್ರಾಂತ ಪ್ರಾಧ್ಯಾಪಕರು, ಸೇಂಟ್ ಅಲೋಶಿಯಸ್ ಕಾಲೇಜು ಹಾಗೂ ಕಿಶನ್ ಶ್ರೀನಿವಾಸ ಅಮ್ಮಾಡಿ, ಇನ್‍ಫೆÇೀಸಿಸ್ ಉದ್ಯೋಗಿ ಇವರುಗಳು ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ಬಾಲಕೃಷ್ಣ ರೈ, ಮಸಾ ಹಿರೊ, ಸತೀಶ್ ಟಿ ಯಕ್ಕೂರು, ಹಿಮ್ಮತ್ ಸಿಂಗ್, ಸಂತೋಷ ಸುವರ್ಣ, ದೀಪಕ್ ಮೇಲಂಟ ಹಾಗೂ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಾ. ಹರೀಶ್ ಜೋಶಿ “ಪರಿಸರ ಸಂರಕ್ಷಣೆ ಪ್ರತಿಯೋರ್ವನ ಕರ್ತವ್ಯವಾಗಿದೆ. ಪ್ರಕೃತಿಯಿಂದ ನಾವು ಸಕಲವನ್ನೂ ಪಡೆಯುತ್ತಿದ್ದೇವೆ. ಹಾಗಾಗಿ ಅದನ್ನು ಹಾಳು ಮಾಡದೇ ರಕ್ಷಿಸಬೇಕಿದೆ. ಪ್ರಕೃತಿಯ ನಾಶದಿಂದ ನಾವು ವಿಕೃತಿಯತ್ತ ಸಾಗಿ, ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಪರಾಕಾಷ್ಠೆ ತಲುಪುತ್ತಿರುವುದು ಖೇದದ ಸಂಗತಿ. ಈ ದಿಸೆಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಸ್ವಚ್ಛ ಸುಂದರ ಪರಿಸರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದು ಶ್ರೇಷ್ಠ ಸಂಗತಿಯಾಗಿದೆ” ಎಂದು ತಿಳಿಸಿದರು.

ಟೆಕ್ಕಿ ಕಿಶನ್ ಶ್ರೀನಿವಾಸ್ ಮಾತನಾಡಿ “ವಿದೇಶಗಳಲ್ಲಿರುವ ಸ್ವಚ್ಛತೆ, ಶಿಸ್ತು ನಮ್ಮ ದೇಶದಲ್ಲಿ ಬರುವಂತಾಬೇಕು ಎಂದು ಬಯಸಿದರೆ ಸಾಲದು. ಅಲ್ಲದೇ ಬರೀ ಸರಕಾರ ಯೋಜನೆ ರೂಪಿಸಿದರೆ ಸಾಕಾಗದು ಆ ಯೋಜನೆಗೆ ಪೂರಕವಾಗಿ ನಾವೆಲ್ಲರೂ ಕೈಜೋಡಿಸಬೇಕು ಅಂದಾಗ ಮಾತ್ರ ನಮ್ಮ ದೇಶ ಸುಂದರವಾಗುತ್ತದೆ. ಕಳೆದ ಎಂಟು ವರ್ಷಗಳಿಂದ ಅಮೇರಿಕೆಯಲ್ಲಿ ಉದ್ಯೋಗದಲ್ಲಿದ್ದೆ. ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎನ್ನುವ ಕಾತರತೆಯಿಂದ ಭಾರತಕ್ಕೆ ಮರಳಿದ್ದೇನೆ. ಸ್ವಚ್ಛ ಮಂಗಳೂರು ಅಭಿಯಾನ ನಾಲ್ಕು ವರ್ಷಗಳಲ್ಲಿ ಬೆಳೆದು ಬಂದ ಪರಿ ಅನನ್ಯ!” ಎಂದು ಬಣ್ಣಿಸಿ, ಸೇರಿದ್ದ ಸ್ವಯಂಸೇವಕರನ್ನು ಅಭಿನಂದಿಸಿದರು.

ಶ್ರಮದಾನ: ಬೊಂದೇಲ್‍ನಲ್ಲಿರುವ ಲೋಕೊಪಯೋಗಿ ಇಲಾಖೆಯ ಕಚೇರಿ ಸನಿಹದಲ್ಲಿರುವ ಅಶ್ವತ್ಥ ಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಶ್ರಮದಾನ ಮಾಡಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ನೂತನವಾಗಿ ನಿರ್ಮಿಸಲಾದ ಬಸ್ ಪ್ರಯಾಣಿಕರ ತಂಗುದಾಣದ ಸುತ್ತಮುತ್ತ ಗುಡಿಸಿ ಸ್ವಚ್ಛಗೊಳಿಸಲಾಯಿತು. ನಂತರ ಕಾರ್ಯಕರ್ತರು ಅಭಿಯಾನದ ಪ್ರಧಾನ ಸಂಯೊಜಕ ದಿಲ್‍ರಾಜ್ ಆಳ್ವ ಮಾರ್ಗದರ್ಶನದಲ್ಲಿ ಬೇರೆ ಬೇರೆ ತಂಡಗಳಾಗಿ ಏರ್‍ಪೆÇೀರ್ಟ್ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಕಾಂಕ್ರೀಟ್ ರಸ್ತೆಯ ಮೇಲೆ ಸೇರಿಕೊಂಡಿದ್ದ ಹೊೈಗೆ ಹಾಗೂ ಮಣ್ಣು ತೆಗೆದರು. ಮಳೆ ನೀರು ಹೋಗಲು ಇರುವಂತಹ ತೂತುಗಳಲ್ಲಿನ ಮಣ್ಣು ತ್ಯಾಜ್ಯ ತೆಗೆದರು. ಚರಂಡಿಗಳನ್ನು ಶುಚಿಗೊಳಿಸಿದರು. ಪ್ರಮುಖವಾಗಿ ಮೂಲೆಯೊಂದರಲ್ಲಿ ಸೇರಿಕೊಂಡಿದ್ದ ತ್ಯಾಜ್ಯ ಹಾಗೂ ಮಣ್ಣಿನ ರಾಶಿಯನ್ನು ತೆರವು ಮಾಡಲಾಯಿತು. ಅಶ್ವತ್ಥ ಕಟ್ಟೆಯ ಮುಂಭಾಗದ ರಸ್ತೆಯ ಬದಿಗಳಲ್ಲಿದ್ದ ಹುಲ್ಲು ಕತ್ತರಿಸಿ ತೆಗೆಯಲಾಯಿತು. ನಂತರ ಕಾಲುದಾರಿಯ ಮೇಲೆ ಸೇರಿಕೊಂಡಿದ್ದ ಮಣ್ಣು ತೆಗೆದು ದಾರಿಹೋಕರಿಗೆ ಅನುಕೂಲ ಕಲ್ಪಿಸಿಕೊಡಲಾಯಿತು. ಎಂದಿನಂತೆ ಏರಪೆÇೀರ್ಟ್ ರಸ್ತೆಯ ಹಲವು ಕಡೆಯಲ್ಲಿ ಹಾಕಿದ್ದ ಬ್ಯಾನರ್ ತೆರವು ಕಾರ್ಯಾಚರಣೆ ಮುಂದುವರೆಯಿತು.

ನೂತನ ಬಸ್ ತಂಗುದಾಣ ಲೋಕಾರ್ಪಣೆ: ಲೋಕೋಪಯೋಗಿ ಕಚೇರಿ ಸಮೀಪದಲ್ಲಿ ಅಶ್ವತ್ಥ ಕಟ್ಟೆ ಬಳಿ ನೂತನವಾಗಿ ಬಸ್ ತಂಗುದಾಣವನ್ನು ನಿರ್ಮಾಣ ಇಂದು ಲೋಕಾರ್ಪಣೆ ಮಾಡಲಾಯಿತು. ಪ್ರಯಾಣಿಕರು ಅಶ್ವತ್ಥ ಮರದಡಿ ನಿಂತು ಬಿಸಿಲು-ಮಳೆಗಳಿಂದ ರಕ್ಷಣೆ ಪಡೆಯುತ್ತಿದ್ದುದರಿಂದ ಹಾಗೂ ಸ್ಥಳೀಯರ ಅಪೇಕ್ಷೆಯಂತೆ ಈ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ಹಿಂದಿನ ಸ್ವಚ್ಛ ಮಂಗಳೂರು ತಂಗುದಾಣಗಳಂತೆ ಎಲ್ಲ ಸೌಲಭ್ಯಗಳನ್ನು ಈ ತಂಗುದಾಣ ಒಳಗೊಂಡಿದೆ. ನಿರ್ಮಾಣ ಕಾರ್ಯದಲ್ಲಿ ಸುಭೋದಯ ಆಳ್ವ, ಉಮಾನಾಥ ಕೋಟೆಕಾರ್, ಅಶೋಕ ಸುಬ್ಬಯ್ಯ ವಿಶೇಷ ಪರಿಶ್ರಮವಹಿಸಿದ್ದಾರೆ.

ತ್ಯಾಜ್ಯ ರಾಶಿಗೆ ಮುಕ್ತಿ: ಮಧ್ಯರಾತ್ರಿ ಕಾರ್ಯಾಚರಣೆ: ಕಳೆದ ಭಾನುವಾರ ಬಿಕರ್ನಕಟ್ಟೆಯಲ್ಲಿ ಶ್ರಮದಾನ ಮಾಡಿ, ತ್ಯಾಜ್ಯದ ರಾಶಿಯನ್ನು ತೆರವು ಮಾಡಲಾಗಿತ್ತು. ನಂತರ ಅಲ್ಲಿಯ ಬೀದಿ ಬದಿಯ ಫಾಸ್ಟ್‍ಪುಡ್ ಅಂಗಡಿಗಳಿಗೆ ಹೋಗಿ ಸ್ವಚ್ಛತೆಯ ತಿಳುವಳಿಕೆ ನೀಡಲಾಗಿತ್ತು. ಅಂದಿನಿಂದ ಕಾರ್ಯಕರ್ತರು ಬೆಳಗ್ಗೆ ಹಾಗೂ ಸಂಜೆ ನಿರಂತರವಾಗಿ ಯಾರೂ ತ್ಯಾಜ್ಯÀ ಸುರಿಯದಂತೆ ಜಾಗ್ರತೆ ವಹಿಸಿ, ಗಸ್ತು ತಿರುಗಿದ್ದರು. ಪರಿಣಾಮವಾಗಿ ತ್ಯಾಜ್ಯ ಬೀಳುವುದು ನಿಂತಿತ್ತು. ಆದರೆ ಖಚಿತ ಮಾಹಿತಿಯ ಮೇರೆಗೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹೋಟೆಲ್ ನಿಂದ ತಂದು ಸುರಿದ ತ್ಯಾಜ್ಯವನ್ನು ಅವರಿಂದಲೇ ತೆಗೆಸಿದ ಅಪರೂಪದ ಘಟನೆ ನಡೆಯಿತು. ಮೂಗುಮುಚ್ಚಿ ಓಡಾಡುತ್ತಿದ್ದ ಸ್ಥಳಿಯರು, ಕಾರ್ಯಕರ್ತರನ್ನು ಹೊಗಳಿ, ಅಭಿನಂದಿಸಿದ್ದಾರೆ. ಇಂದು ಪದವಿನಂಗಡಿ ಹಾಗೂ ಬೊಂದೇಲ್ ಚರ್ಚ್ ಮಧ್ಯದಲ್ಲಿರುವ ಕೊರಗಜ್ಜನ ಗುಡಿಯ ಹತ್ತಿರವಿರುವ ಸ್ಥಳವೊಂದರಲ್ಲಿ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ. ಸುಮಾ ಕೋಡಿಕಲ್, ಚೇತನಾ ಹಾಗೂ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೇ ಶ್ರಮದಾನ ಮಾಡಿದರು. ಸುರೇಶ್ ಶೆಟ್ಟಿ ಹಾಗೂ ನಿವೇದಿತ ಬಳಗದ ಸದಸ್ಯರು ಸುತ್ತಮುತ್ತಲಿನ ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯ ಕೈಗೊಂಡರು.

ಹಸಿಕಸ-ಒಣಕಸ ನಿರ್ವಹಣೆÉ: ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ನಗರದ ವಿವಿಧೆಡೆ ಮನೆಗಳಿಗೆ ತೆರಳಿ ಒಣಕಸ ಹಸಿ ಕಸ ಒಣಕಸದ ವಿಂಗಡಣೆ ಹಾಗೂ ಪುನರ್‍ಬಳಕೆ ಮರುಬಳಕೆಗಳ ಮಹತ್ವ ತಿಳಿಸುತ್ತಿದ್ದಾರೆ. ಹಸಿಕಸವನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ಕಾಂಪೆÇೀಸ್ಟ್ ತಯಾರಿಸುವ ಸರಳ ವಿಧಾನವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿಕೊಡಲಾಗುತ್ತಿದೆ. ಜೊತೆಗೆ ಮಡಕೆಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ ಮನೆಯಲ್ಲಿ ಉತ್ಪಾದನೆಯಾಗುವ ಒಣಕಸವನ್ನು ಸಂಗ್ರಹಿಸಲು ದೊಡ್ದ ಬ್ಯಾಗ್‍ಗಳನ್ನು ಒದಗಿಸಲಾಗುತ್ತಿದೆ. ಅದು ತುಂಬಿದ ಬಳಿಕ ತಿಂಗಳಿಗೊಂದು ದಿನ ಮನೆಯಿಂದ ಸಂಗ್ರಹಿಸಿ, ಸಂಗ್ರಹವಾದ ಒಣತ್ಯಾಜ್ಯಕ್ಕೆ ಸೂಕ್ತ ಬೆಲೆ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜೆಪ್ಪು ಹಾಗೂ ಮಂಗಳಾ ನಗರದ ಕೆಲವೆಡೆ ಮಾಡಲಾಯಿತು. ಅಭಿಷೇಕ್ ವಿ ಎಸ್, ಶ್ರೀಮತಿ ರತ್ನಾ ಆಳ್ವ, ಯಶೋಧಾ ರೈ ಭಾನುಮತಿ, ತೇಜಸ್ವಿನಿ ಮುಂತಾದವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ರಾಕೇಶ್ ಜಯರಾಮ್ ಸುವರ್ಣ, ಪ್ರವೀಣ ಶೆಟ್ಟಿ, ಯೋಗೀಶ್ ಕಾಯರ್ತಡ್ಕ, ಪುನೀತ್ ಪೂಜಾರಿ, ಸತೀಶ್ ಕೆಂಕನಾಜೆ, ಮೋಕ್ಷಿತಾ ಎಚ್ ಪಿ, ಸೇರಿದಂತೆ ಅನೇಕರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಈ ಎಲ್ಲ ಕಾರ್ಯಕ್ರಮಗಳಿಗೆ ಎಂ ಆರ್‍ಪಿಎಲ್ ಸಂಸ್ಥೆ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love