ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೊ ಮೋಹನ್ ಅವರಿಗೆ ಬಹುಮಾನ

Spread the love

ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೊ ಮೋಹನ್ ಅವರಿಗೆ ಬಹುಮಾನ

ಉಡುಪಿ: ಇಂಡಿಯಾ ಇಂಟರ್ ನ್ಯಾಷನಲ್ ಫೋಟೋಗ್ರಾಫಿಕ್ ಕೌನ್ಸಿಲ್ ಹಾಗೂ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೊ ಮೋಹನ್ ಅವರಿಗೆ ಓಪನ್ ಕಲರ್ರ್ ವಿಭಾಗದಲ್ಲಿ ಸ್ವರ್ಣ ಪದಕ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಬಹುಮಾನ ಪ್ರಾಪ್ತವಾಗಿದೆ .

ಓಪನ್ ಕಲರ್ ವಿಭಾಗದಲ್ಲಿ ಹನುಮಾನ್ ಬಿಫೋರ್ ಫ್ಲೈ. ಚಿತ್ರಕ್ಕೆ ಆಂಧ್ರ ಪ್ರದೇಶ ಅಕಾಡೆಮಿ ಸ್ವರ್ಣ ಪದಕ ದೊರಕಿದೆ. ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ಹೂ ಈಸ್ ಸುಪ್ರೀಮ್ ಚಿತ್ರಕ್ಕೆ ಪ್ರಥಮ ಬಹುಮಾನ ಪ್ರಾಪ್ತವಾಗಿದೆ. ಇದರೊಂದಿಗೆ ಆಸ್ಟ್ರೊ ಅವರ 8 ಚಿತ್ರಗಳು ಸ್ವೀಕೃತಿಯನ್ನು ಪಡೆದಿವೆ.


Spread the love