ರಿಕ್ಷಾ ಚಾಲಕರಿಗೆ ಘೋಷಿಸಿದ  ರೂ. 5000/- ವಿಶೇಷ ಪ್ಯಾಕೇಜ್ ಕೂಡಲೇ ಬಿಡುಗಡೆ ಮಾಡಿ – ಐವನ್ ಡಿಸೋಜಾ  

Spread the love

ರಿಕ್ಷಾ ಚಾಲಕರಿಗೆ ಘೋಷಿಸಿದ  ರೂ. 5000/- ವಿಶೇಷ ಪ್ಯಾಕೇಜ್ ಕೂಡಲೇ ಬಿಡುಗಡೆ ಮಾಡಿ – ಐವನ್ ಡಿಸೋಜಾ  

ಮಂಗಳೂರು: ರಾಜ್ಯ ಸರ್ಕಾರ 1,70,000 ಮಂದಿ ರಿಕ್ಷಾ, ಕಾರು ಚಾಲಕರಿಗೆ ಒಂದು ಬಾರಿ ರೂ. 5000/- ನ್ನು ನೀಡಲು ಕ್ರಮಕೈಗೊಂಡಿದ್ದು, ಸ್ವಾಗಹ೯ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.

ಅವರು ಬಜ್ಪೆ, ಮರೋಳಿ, ಕುಲಶೇಖರ,  ಶಕ್ತಿನಗರದಲ್ಲಿ ಸುಮಾರು 250ಕ್ಕೂ ಅಧಿಕ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಿಸಿ ಮಾತನಾಡಿದರು.

ನಾವು  ಕನಿಷ್ಠ 10,000/- ನೀಡಬೇಕೆಂದು ಹೇಳಿದ ಬೇಡಿಕೆಯನ್ನು ಸಕಾ೯ರ ಈಡೇರಿಸಿಲ್ಲ. ಅಲ್ಲದೆ ಒಂದು ತಿಂಗಳ ರೇಶನ್ ನೀಡಲು ಸಕಾ೯ರ ಕ್ರಮ ಕೈಗೊಳ್ಳಬೇಕು, ಘೋಷಣೆ ಮಾಡಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು  ಒತ್ತಾಯಿಸಿದರು.

ದುಡಿಯುವ ವರ್ಗಕ್ಕೆ ತುಂಬಾ ತೊಂದರೆ ಆಗಿದೆ. ಈ ವಗ೯ವನ್ನು ರಕ್ಷಿಸಬೇಕು ಮತ್ತು  ಈ ವಗ೯ಕ್ಕೆ ನ್ಯಾಯ ಒದಗಿಸಬೇಕು  ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.


Spread the love