ರುಂಡ ಬೇರ್ಪಡಿಸಿ ಅಬ್ದುಲ್ ಸಲಾಂ ಕೊಲೆ : 6 ಆರೋಪಿಗಳ ಬಂಧನ

Spread the love

ರುಂಡ ಬೇರ್ಪಡಿಸಿ ಅಬ್ದುಲ್ ಸಲಾಂ ಕೊಲೆ : 6 ಆರೋಪಿಗಳ ಬಂಧನ
ಕಾಸರಗೋಡು: ಮೊಗ್ರಾಲ್ ಬಳಿಯ ಪೇರಾಲ್ ಅಬ್ದುಲ್ ಸಲಾಂ ಕೊಲೆ ಪ್ರಕರಣಕ್ಕೆ ಸಂಬಂಧೀಸಿ ಕುಂಬಳೆ ಪೋಲಿಸರ 6 ಮಂದಿಯನ್ನು ಬಂಧೀಸಿದ್ದಾರೆ.

ಬಂಧಿತರನ್ನು ಸಿದ್ದೀಕ್, ಉಮ್ಮರ್ ಫಾರೂಕ್ ಕೆ ಎಸ್, ಪೆರುವಾಡ್ ಸಹೀರ್, ನಿಯಾಝ್, ಹಾರಿಸ್ ಮತ್ತು ಲತೀಫ್ ಎಂದು ಗುರತಿರಲಾಗಿದೆ.

ಎಪ್ರಿಲ್ 29ರಂದು ಸಿದ್ದಿಕ್ ಮನೆಗೆ ಬಂದಿದ್ದ ಅಬ್ದುಲ್ ಸಲಾಂ ಹಾಗೂ ಇತರ ಮೂವರು ಸಿದ್ದಿಕ್ ತಾಯಿ ಹಾಗೂ ಪತ್ನಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದು, ಇದರಿಂದ ಕೆರಳಿದ್ದ ಸಿದ್ದಿಕ್ ಅಬ್ದುಲ್ ಸಲಾಂ ಕೊಲೆಗೆ ಸಂಚು ರೂಪಿಸಿ ಸ್ಥಳವೊಂದಕ್ಕೆ ಕರೆಯಿಸಿ ಸಲಾಂ ಮೇಲೆ ಹಲ್ಲೆ ನಡೆಸಿ ಕೊಲೆಗೈದು, ತಲೆಯನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಮರಳು ಮಾಫಿಯಾದ ವೈಮನಸ್ಸು ಈ ಎಲ್ಲಾ ಬೆಳವಣಿಗೆಗೆ ಕಾರಣ ಪೋಲಿಸರು ತಿಳಿಸಿದ್ದಾರೆ.


Spread the love