ರೋವರ್ಸ್-ರೇಂಜರ್ಸ್ ಚಾರಣ ಶಿಬಿರ

Spread the love

ರೋವರ್ಸ್-ರೇಂಜರ್ಸ್ ಚಾರಣ ಶಿಬಿರ
ಮ0ಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ರಥಬೀದಿ ಇಲ್ಲಿನ ರೋವರ್ಸ್-ರೇಂಜರ್ಸ್ ಘಟಕದ ಚಾರಣ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ನರಹರಿಬೆಟ್ಟ ಮತ್ತು ಬೆಳ್ತಂಗಡಿ ತಾಲೂಕಿನ ಶಿಶಿಲಕ್ಕೆ ಏರ್ಪಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಇವರು – ಪ್ರಕೃತಿ ಅಧ್ಯಯನ ಹಾಗೂ ಪ್ರಕೃತಿಯೊಂದಿಗೆ ಸಹಬಾಳ್ವೆ ಸ್ಕೌಟಿಂಗ್ ನ ಮೂಲ ತತ್ವವಾಗಿದೆ. ನೆಲ, ಜಲ, ಅರಣ್ಯ ಹಾಗೂ ಮಣ್ಣಿನ ಸೊಗಡನ್ನು ಅರಿತು ಅದರೊಂದಿಗೆ ಸಹಬಾಳ್ವೆ ನಡಿಸಿದಾಗ ಬದುಕು ಅರ್ಥಪೂರ್ಣವಾಗುವುದೆಂದು ತಿಳಿಸಿ, ಚಾರಣ ಹೊರಟ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರೊ. ರವಿಕುಮಾರ್ ಹಾಗೂ ಡಾ. ಶರ್ಮಿಳಾ ರೈ ಉಪಸ್ಥಿತರಿದ್ದರು. ರೋವರ್ ಘಟಕದ ಸಂಚಾಲಕ ಪ್ರೊ. ಪುರುಷೋತ್ತಮ ಭಟ್ ಯನ್ ಚಾರಣದ ಮುಂದಾಳುತ್ವ ವಹಿಸಿದ್ದರು. ಚಾರಣ ಸ್ಥಳದಲ್ಲಿ ಘಟಕದ ವಿದ್ಯಾರ್ಥಿಗಳಿಗಾಗಿ ಸ್ಕೌಟಿಂಗ್ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕಿಯರಾದ ಕು. ಶಿಲ್ಪಾ, ಶ್ರೀಮತಿ ಉಷಾ, ಕು. ದಿವ್ಯಾ ಹಾಗೂ ಪ್ರೊ. ಧೀರಜ್ ರವರು ಚಾರಣದಲ್ಲಿ ಭಾಗವಹಿಸಿ ಸಹಕರಿಸಿದರು.


Spread the love