ಲೋಕಸಭಾ ಚುನಾವಣೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ನಾಮಪತ್ರ ಸಲ್ಲಿಕೆ

Spread the love

ಲೋಕಸಭಾ ಚುನಾವಣೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ನಾಮಪತ್ರ ಸಲ್ಲಿಕೆ

ಮಂಗಳೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ನಾಮಪತ್ರಗಳು ಸಲ್ಲಿಕೆ ಆಗಿವೆ.

ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ (2), ಬಿಜೆಪಿಯಿಂದ ಸುದರ್ಶನ (2), ಪಕ್ಷೇತರರಾಗಿ ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜಾ, ಮಹಮ್ಮದ್ ಖಾಲಿದ್, ವೆಂಕಟೇಶ್ ಬೆಂಡೆ, ಅಬ್ದುಲ್ ಹಮೀದ್, ಸುರೇಶ್ ಪೂಜಾರಿ
ಎಚ್ (2), ಹಿಂದುಸ್ಥಾನ ಜನತಾ ಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಬಿಎಸ್‌ಪಿಯಿಂದ ಸತೀಶ್ ಸಾಲ್ಯಾನ್ ಅವರು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟು 16 ಮಂದಿ ಕಣದಲ್ಲಿದ್ದಾರೆ. ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ ಇದೇ 29.

ಲೋಕ ತಾಂತ್ರಿಕ ಜನತಾದಳದಿಂದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ ಶ್ರೀನಿವಾಸ ಸಿ, ಪಕ್ಷೇತರರಾಗಿ ಡಾ. ದೀಪಕ್ ರಾಜೇಶ್ ಕುವೆಲ್ಲೊ, ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ (2), ಪಕ್ಷೇತರರಾಗಿ ಮ್ಯಾಕ್ಸಿಂ ಪಿಂಟೋ, ಸೋಶಿಯಲ್ ಡೆಮಾಕ್ರಟಿಕ್ ಪಕ್ಷದಿಂದ ಮಹಮ್ಮದ್ ಇಲಿಯಾಸ್, ಇಸ್ಮಾಯಿಲ್ ಶಾಫಿ ಕೆ, ಕಾಂಗ್ರೆಸ್ನಿಂದ ಮಿಥುನ್ ರೈ (4) ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.


Spread the love