ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ: ನಳಿನ್‍ಕುಮಾರ್ ಕಟೀಲ್

Spread the love

ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ: ನಳಿನ್‍ಕುಮಾರ್ ಕಟೀಲ್

ಮಂಗಳೂರು : ಪ್ರಾಥಮಿಕ ದೂರಿನ ಆಧಾರದಲ್ಲಿ ಪತ್ರಕರ್ತ ಮಹೇಶ ವಿಕ್ರಂ ಹೆಗ್ಡೆ ಅವರನ್ನು ಪೋಲೀಸರು ಬಂಧಿಸಿ ಅನಗತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ. ಹಿಂದೂಗಳ ಪರ ಧ್ವನಿ ಎತ್ತುವ ಮೂಲಕ ನ್ಯಾಯ ಒದಗಿಸಲು ಯತ್ನಿಸುತ್ತಿದ್ದ ಹೆಗ್ಡೆ ಬಂಧನದ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟವಾಗಿದೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಹೇಶ ವಿಕ್ರಂ ಹೆಗ್ಡೆ ಅವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ವಿನಾಕಾರಣ ಅವರನ್ನು ಬಂಧನದಲ್ಲಿರಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೋಲೀಸರು ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದವರು, ಗೋಕಳ್ಳರು, ಸರ್ಕಾರಿ ಕಚೇರಿಗಳಿಗೆ ಪೋಲೀಸರ ಎದುರೇ ಕಲ್ಲು ಹೊಡೆದವರು ನಿರ್ಭೀತಿಯಿಂದ ತಿರುಗುತ್ತಿದ್ದಾರೆ. ಆದರೆ ಹಿಂದೂ ಪರ ಕೆಲಸ ಮಾಡುವವರನ್ನು ಬಂಧಿಸಲಾಗುತ್ತಿದೆ. ಇದೇ ರೀತಿ ಅನ್ಯಾಯ ಎಸಗಿದರೆ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love