ವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಬಾಲಕೃಷ್ಣ ಶೆಟ್ಟಿ

Spread the love

ವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಬಾಲಕೃಷ್ಣ ಶೆಟ್ಟಿ

ಮೂಡುಬಿದಿರೆ: ಅಧ್ಯಾಪಕರಲ್ಲಿ ಯಾವಾಗಲೂ ಮಾನವೀಯ ಗುಣಗಳು ಇರಬೇಕು. ಮಕ್ಕಳ ಮನವೊಲಿಸಿ, ಅವರ ಅವಶ್ಯಕತೆಗಳನ್ನು ಅರಿತು, ಉತ್ತಮ ರೀತಿಯಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಡುವ ಅಧ್ಯಾಪಕರು ಕೊನೆಯವರೆಗೂ ಅವರ ಮನಸ್ಸಿನಲ್ಲಿ ಉತ್ತಮ ಅಧ್ಯಾಪಕರಾಗಿಯೇ ಉಳಿಯುತ್ತಾರೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಟ ಶೆಟ್ಟಿ ಹೇಳಿದರು.

ಆಳ್ವಾಸ್ ಕಾಲೇಜಿನ ಬಿ.ಎಡ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಅಧ್ಯಾಪನ ವೃತ್ತಿಗೆ ತನ್ನದೇ ಆದ ಮಹತ್ವವಿದೆ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿನ ಗೊಂದಲಗಳಿಂದಾಗಿ ಹಲವು ಬಾರಿ ಅಧ್ಯಾಪಕರು ಎಡವುತ್ತಿರುವುದು ಸಹಜ. ತರಗತಿಯಲ್ಲಿನ ಪ್ರತಿಯೊಬ್ಬರನ್ನೂ ತನ್ನತ್ತ ಸೆಳೆಯುವ ಚಾಕಚಕ್ಯತೆ ಅಧ್ಯಾಪಕರು ಹೊಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರೌಢ ಶಾಲಾ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಳ್ವಾಸ್ ಬಿ.ಎಡ್ ಕಾಲೇಜಿನ ಇನ್‍ಚಾರ್ಜ್ ಪ್ರಿನ್ಸಿಪಾಲ್ ಶಂಕರ್‍ಮೂರ್ತಿ ಹೆಚ್.ಕೆ ಉಪಸ್ಥಿತರಿದ್ದರು. ವಿಜಯ ಲಕ್ಷ್ಮೀ ಪೈ ಸ್ವಾಗತಿಸಿ, ನಿರೂಪಿಸಿದರು. ನಿಶಾ ಜೈನ್ ವಂದಿಸಿದರು.


Spread the love