ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಪ್ರಖ್ಯಾತ್ ಶೆಟ್ಟಿ ತಂಡ ಅಭಿನಂದನೆ

Spread the love

ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಪ್ರಖ್ಯಾತ್ ಶೆಟ್ಟಿ ತಂಡ ಅಭಿನಂದನೆ

ಉಡುಪಿ: ನೂತನವಾಗಿ ವಿಧಾನಪರಿಷತ್ ಇದರ ಸಭಾಪತಿಯಾಗಿ ಆಯ್ಕೆಯಾದ ಕೆ. ಪ್ರತಾಪ್ ಚಂದ್ರ ಶೆಟ್ಟಿಯವರನ್ನುಅವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಯತೀಶ್ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಅಭಿನಂದಿಸಿ ಮಾತನಾಡಿದ ಪ್ರಖ್ಯಾತ್ ಶೆಟ್ಟಿ ಪ್ರತಾಪ್ ಚಂದ್ರ ಶೆಟ್ಟಿಯವರು ಸದಾ ಪಕ್ಷಕ್ಕೆ ನಿಷ್ಟರಾಗಿ, ಜನಸಾಮಾನ್ಯರೊಂದಿಗೆ ಒಡನಾಟ ಇಟ್ಟುಕೊಂಡವರಾಗಿದ್ದಾರೆ. ಸದಾ ಜನತೆಯ ಪರ ಧ್ವನಿ ಎತ್ತಿ ಎತ್ತರಕೆ ಬೆಳೆದಿರುವುದಲ್ಲದೆ, ರೈತ ಸಂಘವನ್ನು ಕಟ್ಟಿ ಪಕ್ಷಾತೀತ ರೈತರಿಗಾಗಿ ಹೋರಾಟ ಮಾಡಿದರ ಪರಿಣಾಮ ಪಕ್ಷ ವಿಧಾನಪರಿಷತ್ ಸಭಾಪತಿಯಾಗಿ ಅತಿ ಎತ್ತರದ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಅವರು ಸೇವೆ ಮತ್ತು ಹಿರಿತನಕ್ಕೆ ಸಂದ ಗೌರವ ಎಂದರು.


Spread the love