ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ

Spread the love

ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ

ಉಡುಪಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಕರಾವಳಿ ಭಾಗದ ಮೀನುಗಾರರಾದ ಮೊಗವೀರ ಜನಾಂಗದವರನ್ನು ಆಯ್ಕೆ ಮಾಡಬೇಕೆಂದು ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ನವದೆಹಲಿ ಇದರ ಕಾರ್ಯದರ್ಶಿಯಾದ ಶ್ರೀ ಕಿರಣ್ ಕುಮಾರ್ ಉದ್ಯಾವರ ಆಗ್ರಹಿಸಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಲವಾರು ವರ್ಷಗಳಿಂದ ತಳಮಟ್ಟದಲ್ಲಿ ಬೆಳೆಸಿ ಭದ್ರ ಬುನಾಧಿ ಹಾಕಿ ಕೊಟ್ಟವರಲ್ಲಿ ಮೀನುಗಾರರು ಮೊದಲಿಗರು. ಆದರೆ ಅಧಿಕಾರ ಪಡೆಯುವ ಸಂದರ್ಭದಲ್ಲಿ ಯಾವಾಗಲು ವಂಚಿತರಾಗುವುದು ಸಹಜ. ಇತ್ತಿಚಿನ ದಿನಗಳಲ್ಲಿ ಕರಾವಳಿಯಲ್ಲಿ ಪಕ್ಷವನ್ನು ಬಲಪಡಿಸುವ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮೀನುಗಾರ ಮುಖಂಡರಾದ ರಾಷ್ಟ್ರಿಯ ಮೀನುಗಾರ ಕಾಂಗ್ರೆಸ್ ನ ಕಾರ್ಯಅಧ್ಯಕ್ಷರಾದ , ಮಾಜಿ ಶಾಸಕರಾದ ಯು ಆರ್ ಸಭಾಪತಿ, ಮಾಜಿ ಮಂತ್ರಿಗಳಾದ ಪ್ರಮೋದ್ ಮಾದ್ವರಾಜ್, ಹಾಗೂ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್, ಪಕ್ಷದ ಹಿರಿಯ ಕಾರ್ಯಕರ್ತರಾದ ಮಹಾಬಲ ಕುಂದರ್, ಹಿರಿಯಣ್ಣ ಕುಂದಾಪುರ, ಕೇಶವ ಕೋಟ್ಯಾನ್, ಮದನ್ ಕುಮಾರ್, ಸರಳಕಾಂಚನ್ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಕರಾವಳಿ ಭಾಗಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ರಾಷ್ಟ್ರೀಯ ಅಧ್ಯಕ್ಷರಿಗೆ, ನಾಯಕರಾದ ರಾಹುಲ್ ಗಾಂಧಿ ಹಾಗೂ ರಾಜ್ಯ ಅದ್ಯಕ್ಷರಿಗೆ ಪತ್ರದ ಮೂಲಕ ವಿನಂತಿ ಮಾಡಲಾಗಿದೆ. ಅಲ್ಲದೆ ಅಗತ್ಯಬಿದ್ದರೆ ನಿಯೋಗವನ್ನು ಬೆಂಗಳೂರು ಹಾಗೂ ದೇಹಲಿಗೆ ಕರೆದುಕೊಂಡು ಹೋಗಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ


Spread the love