ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ  ವಜಾಗೊಳಿಸಿ : ಎನ್.ಎಸ್.ಯು.ಐ

Spread the love

ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ  ವಜಾಗೊಳಿಸಿ : ಎನ್.ಎಸ್.ಯು.ಐ

ಉಡುಪಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದನ್ನು  ಉಡುಪಿ ಜಿಲ್ಲಾ ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಉಡುಪಿ ಜಿಲ್ಲಾ ಎನ್.ಎಸ್.ಯು.ಐ  ಅಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಅವರು ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೋಮು ಬಣ್ಣ ಬಳಿಯುವ ಕೆಲಸ ಮಾಡಿದ್ದಲ್ಲದೆ,ಸಂವಿಧಾನವನ್ನೂ ಅಪಮಾನಿಸುವ ಹೇಳಿಕೆ ನೀಡಿದ್ದರು. ಇದೀಗ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸುವ ಕೆಲಸವನ್ನು ಮಾಡಿದ್ದಾರೆ.ಇದನ್ನು ಯಾರೂ ಸಹಿಸುವುದಿಲ್ಲ.

ಬೆಳಗಾವಿಯ ಕಾರ್ಯಕ್ರಮದಲ್ಲಿ  ಬುಧ್ದಿಜೀವಿಗಳ ವಿರುದ್ದ ಹರಿಹಾಯ್ದಿರುವ  ಅನಂತ್‍ಕುಮಾರ್ ಹೆಗ್ಡೆ ಅವರು, ವಿಚಾರವಾದಿಗಳನ್ನು “ಸೋ ಕಾಲ್ಡ್ ಬುಧ್ದಿ ಜೀವಿಗಳು “ಎಂದು ಜರಿದಿರುವುದಲ್ಲದೆ, ಕೇವಲ ಸರ್ಕಾರಿ ಸೈಟಿಗಾಗಿ ಅವರು ಬುದ್ಧಿಜೀವಿಗಳು ಎಂದು ಗುರುತಿಸಿಕೊಳ್ಳುವುದಲ್ಲದೆ, ಅವರು  ತೋಚಿದ್ದೆಲ್ಲಾ  ಕಾವ್ಯ  ಅವರ ಬರಹಕ್ಕೆ ಅರ್ಥವೂ ಇರುವುದಿಲ್ಲ. ತಳ,ಬುಡ ಯಾವುದೂ ಇರುವುದಿಲ್ಲ ಎಂದು ಹೇಳುವ ಮೂಲಕ ಇಡೀ ಸಾರಸ್ವತ ಲೋಕವನ್ನೇ ಅಪಮಾನಿಸಿದ್ದಾರೆ.

ಅಲ್ಲದೆ ಸಾಹಿತಿಗಳು “ನಾವು ಮಾನವರಾಗಬೇಕು” ಎಂದು ಹೇಳುತ್ತಾರೆ. ಹಾಗಾದರೆ “ನಾವು ದನವಾ” ಎಂದು ಹೇಳುವ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನವಾಗುವ ರೀತಿ ಹೇಳಿಕೆ ನೀಡಿದ್ದಾರೆ.

ಈ ರೀತಿ ಪದೇ ಪದೇ ನಮ್ಮ ಸಂವಿಧಾನದ ಬಗ್ಗೆ, ಸಾರಸ್ವತ ಲೋಕದ ದಿಗ್ಗಜರ ಬಗ್ಗೆ ಅಪಮಾನಕರವಾಗಿ ಮಾತನಾಡಿ ತಮ್ಮ ಮಾತಿನ ಚಪಲ ತೀರಿಸಿಕೊಳ್ಳುತ್ತಿದ್ದಾರೆ.

ಅನಂತ್ ಕುಮಾರ್ ಹೆಗ್ಡೆ ಅವರು ಕೇಂದ್ರ  ಸಚಿವರಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಂಡಿಲ್ಲ. ಅವರು ಸಂವಿಧಾನಕ್ಕೆ ಅಪಮಾನಕರವಾಗುವಂತೆ ಮಾತನಾಡಿದಾಗಲೇ ಅವರನ್ನು ಸಚಿವ ಸ್ಥಾನದಿಂದ  ವಜಾ ಮಾಡುವಂತೆ ಎನ್.ಎಸ್.ಯು.ಐ ಆಗ್ರಹಿಸಿತ್ತು.ಆದರೂ ಅವರನ್ನು ಇನ್ನೂ ಸಚಿವಸ್ಥಾನದಲ್ಲೇ ಮುಂದುವರೆಸಿಕೊಂಡು ಬರುತ್ತಿರುವುದು ಸರಿಯಲ್ಲ

ಕೂಡಲೇ ಈ ರೀತಿ ಅಪಮಾನಕರವಾಗುವಂತೆ ಹೇಲಿಕೆ ನೀಡುತ್ತಾ ಈ ನಾಡಿನ, ದೇಶದ ಜನರ ಭಾವನೆಗಳ ಜೊತೆ ಆಟವಾಡುತ್ತಿರುವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಸಚಿವ-ಸಂಸದ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸುತ್ತಿದ್ದೇವೆ.ಇಲ್ಲವಾದಲ್ಲಿ  ಉಡುಪಿ ಜಿಲ್ಲಾ ಎನ್.ಎಸ್.ಯು.ಐ.ತನ್ನ ಹೋರಾಟ ಮುಂದುವರೆಸುವುದು  ಎಂದು ತಿಳಿಸಿದ್ದಾರೆ.


Spread the love