ವಿಶೇಷ ಸಾಮರ್ಥ್ಯದ ಗಾಯಕಿ ಹಾಗೂ ಸಂಗೀತ ಶಿಕ್ಷಕಿ ಕಸ್ತೂರಿ ಕಾಮತ್ ನಿಧನ

Spread the love

ವಿಶೇಷ ಸಾಮರ್ಥ್ಯದ ಗಾಯಕಿ ಹಾಗೂ ಸಂಗೀತ ಶಿಕ್ಷಕಿ ಕಸ್ತೂರಿ ಕಾಮತ್ ನಿಧನ

ಮಂಗಳೂರು: ರಾಜ್ಯ ಪ್ರಶಸ್ತಿ ವಿಜೇತೆ, ವಿಶೇಷ ಸಾಮರ್ಥ್ಯದ ಗಾಯಕಿ ಹಾಗೂ ಸಂಗೀತ ಶಿಕ್ಷಕಿ ಕಸ್ತೂರಿ ಕಾಮತ್ (45) ಅವರು ಹೃದಯಾಘಾತದಿಂದ ನಿಧನರಾದರು.

ದೃಷ್ಟಿಹೀನರಾಗದ್ದ ಕಸ್ತೂರಿಯವರ ಸಾಧನೆ ಅಪಾರವಾಗಿದ್ದು ಪ್ರತಿಭಾನ್ವಿತ ಗಾಯಕಿಯಾಗಿದ್ದು, ಕಳೆದ 20 ವರ್ಷಗಳಿಂದ ಎಸ್ ಡಿಎಂ ಮಂಗಳಜ್ಯೋತಿ ಶಾಲೆಯಲ್ಲಿ ಸಂಗೀತ ಕಲಿಸುತ್ತಿದ್ದರು. ಅಲ್ಲದೆ ಮಂಗಳೂರು ಬೆಂಗಳೂರು ಮತ್ತು ಕೇರಳದಂತಹ ಸ್ಥಳಗಳಲ್ಲಿ ಟಿವಿ ಮತ್ತು ರೇಡಿಯೋದಲ್ಲಿ 5000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದರು.

ಕಸ್ತೂರಿ ಅವರ ಪ್ರತಿಭೆ ಮತ್ತು ಸಾಧನೆಗಳನ್ನು ಗುರುತಿಸಿ ವಿವಿಧ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿತ್ತು. 2009ರಲ್ಲಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ವಿಭಿನ್ನ ಸಾಮರ್ಥ್ಯದ ಸಂಗೀತ ಪ್ರಶಸ್ತಿ ಪಡೆದಿದ್ದರು.

ಇದಲ್ಲದೆ ಇವರಿಗೆ ಕಿತ್ತೂರು ಚೆನ್ನಮ್ಮ, ಹೆಲೆನ್ ಕೆಲ್ಲರ್ ಡೆ ವಿಶ್ವ ಮಹಿಳಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ


Spread the love

1 Comment

Comments are closed.