ವೇಣೂರಿನಲ್ಲಿ ಅಫಘಾತಕ್ಕಿಡಾಗಿ ಮರವ್ನೇರಿದ ಕಾರು!

Spread the love

ವೇಣೂರಿನಲ್ಲಿ ಅಫಘಾತಕ್ಕಿಡಾಗಿ ಮರವ್ನೇರಿದ ಕಾರು!

ಬೆಳ್ತಂಗಡಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮರವನ್ನೇರಿದ ರೀತಿಯಲ್ಲಿ ನಿಂತ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣೇಲ್ ಎಂಬಲ್ಲಿ ನಡೆದಿದೆ.

ಭಾನುವಾರ ಬೆಳಗಿನ ಜಾವ ವಲೇರಿಯನ್ ಮತ್ತು ಇಮ್ರಾನ್ ಎಂಬವರು ಬೆಳ್ತಂಗಡಿಗೆ ತೆರಳಿತ್ತಿದ್ದು, ಚಾಲಕ ವಲೇರಿಯನ್ ಕರಮಣೇಲು ಬಳಿ ತಲುಪಿದಾಗ ಇನ್ನೊಂದು ವಾಹನಕ್ಕೆ ದಾರಿ ನೀಡುವ ವೇಳೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಯಿತು. ಅಫಘಾತದ ತೀವ್ರತೆಗೆ ಕಾರು ಮರವನ್ನೇರಿದ ರೀತಿಯಲ್ಲಿ ನಿಂತಿದೆ.

ಅದೃಷ್ಟವಷಾತ್ ವವೇರಿಯನ್ ಮತ್ತು ಇಮ್ರಾನ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.


Spread the love