ವ್ಯವಹಾರದಲ್ಲಿ ನಷ್ಟ; ಸ್ವರ್ಣೋದ್ಯಮಿ ನದಿಗೆ ಹಾರಿ ಆತ್ಮಹತ್ಯೆ

Spread the love

ವ್ಯವಹಾರದಲ್ಲಿ ನಷ್ಟ; ಸ್ವರ್ಣೋದ್ಯಮಿ ನದಿಗೆ ಹಾರಿ ಆತ್ಮಹತ್ಯೆ

ಕುಂದಾಫುರ: ವ್ಯವಹಾರದಲ್ಲಿ ನಷ್ಟ ಹಾಗೂ ಸಾಲ ಭಾಧೆಯಿಂದ ಮನನೊಂದು ಕುಂದಾಪುರದ ವಿಜಯ ಜುವೆಲರ್ಸ್ ಮಾಲಕ ಶ್ರೀನಿವಾಸ್ ಶೇಟ್ (56) ಅವರು ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕುಂದಾಪುರ ಸಮೀಪದ ಆನಗಳ್ಳಿಯಲ್ಲಿ ಸಂಭವಿಸಿದೆ.

ಮೃತರ ಅಣ್ಣನ ಪುತ್ರ ಸುಧೀಂದ್ರ ಶೇಟ್ ನೀಡಿದ ದೂರಿನಂತೆ ವ್ಯವಹಾರದಲ್ಲಿ ನಷ್ಟವುಂಟಾಗಿದ್ದು ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುಬಹುದು ತಿಳಿಸಲಾಗಿದೆ.

ಮೃತರ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕುಂದಾಫುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love