ಶಾಸಕ ಮೊಹಿದಿನ್ ಬಾವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನಿಂದನೆ : ದೂರು ದಾಖಲು

Spread the love

ಶಾಸಕ ಮೊಹಿದಿನ್ ಬಾವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ  ನಿಂದನೆ  : ದೂರು ದಾಖಲು

ಮಂಗಳೂರು: ಜಾಲತಾಣಗಳಲ್ಲಿ (Facebook )ಯತೀಶ್  ಪೆರುವಾಯಿ ಮತ್ತು ಅಶ್ವತ್ ಕುಮಾರ್ ಕೊಡಿಯಾಲ್ ಬೈಲ್ ಎಂಬ ಹೆಸರಿನಲ್ಲಿ  ಮಂಗಳೂರು ಉತ್ತರ ಶಾಸಕ (ಸುರತ್ಕಲ್ )ಮೊಹಿದಿನ್ ಬಾವ ರವರನ್ನು ಅಶ್ಲೀಲ ಶಬ್ದಗಳಲ್ಲಿ ನಿಂದಿಸಿದ್ದಲ್ಲದೆ ಉಭಯ  ಸಮುದಾಯಯಗಳನ್ನು ಎತ್ತಿ ಕಟ್ಟಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಲ್ಲದೇ ಸುರತ್ಕಲ್ ನ ಅಭಿವೃದ್ಧಿಯ ಹರಿಕಾರ ಶಾಸಕ ಬಿ ಮೊಹಿದಿನ್ ಬಾವ ರವರ ಘನತೆಗೆ ದಕ್ಕೆ ತಂದ ಕಿಡಿಗೇಡಿ ಗಳನ್ನು ಕೂಡಲೇ ಬಂದಿಸಿ,ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೇಸ್ ವತಿಯಿಂದ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ನಿಯೋಗದಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಕುಂತಲಾ ಕಾಮತ್,ಬ್ಲಾಕ್ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ , ಯುವ ಕಾಂಗ್ರೇಸ್ ಊಪಾದ್ಯಕ್ಷ ಉತ್ತಮ್ ಆಳ್ವ,, ಆಶಾ ಶೆಟ್ಟಿ, ಶಿಶಿಲ ಶೆಟ್ಟಿ  ಇಲ್ಯಾಸ್, ಬಾವ, ಸರಫುದ್ದೀನ್, ಫೈಜಲ್ ಆಂಗರಗುಂಡಿ, ನಾಗರಾಜ್ , ಮತ್ತಿತರರು  ಉಪಸ್ತಿತರಿದ್ದರು


Spread the love