ಶಿಕ್ಷಕಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿಲ್ಲ, ಅವರ ಅಮಾನತಿಗೆ ಶಾಸಕ ವೇದವ್ಯಾಸ್ ಕಾಮತ್ ಬಲವಂತಪಡಿಸಿದರು: ಸಿಸ್ಟರ್ ಅನಿತಾ

Spread the love

ಶಿಕ್ಷಕಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿಲ್ಲ, ಅವರ ಅಮಾನತಿಗೆ ಶಾಸಕ ವೇದವ್ಯಾಸ್ ಕಾಮತ್ ಬಲವಂತಪಡಿಸಿದರು: ಸಿಸ್ಟರ್ ಅನಿತಾ

ಮಂಗಳೂರು: ಶಿಕ್ಷಕಿ ಸಿಸ್ಟರ್ ಪ್ರಭಾ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿಲ್ಲ, ಆಕೆಯನ್ನು ಕೆಲಸದಿಂದ ತೆಗೆದುಹಾಕಲು ಶಾಸಕ ವೇದವ್ಯಾಸ್ ಕಾಮತ್ ಆಡಳಿತವನ್ನು ಬಲವಂತ ಪಡಿಸಿದರು ಎಂದು ಸಂತ ಜೆರೋಸಾ ಶಾಲೆ ಮುಖ್ಯೋಪಾಧ್ಯಾಯಿನಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಂತ ಜೆರೋಸಾ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಅವರು, “ಜೆರೋಸಾ ಶಾಲೆ ಫೆಬ್ರವರಿ 8ರಂದು ಒಂದು ದುರಾದೃಷ್ಟಕರ ಮತ್ತು ದುಃಖಕರ ಘಟನೆಗೆ ಸಾಕ್ಷಿಯಾಯಿತು.

ಶಾಲೆಯ ಕಳೆದ 60 ವರ್ಷಗಳ ಅಸ್ತಿತ್ವದ ಇತಿಹಾಸದಲ್ಲಿಯೇ ಇಂತಹ ಘಟನೆ ಇದೇ ಮೊದಲು. ಫೆಬ್ರವರಿ 10 ರಂದು ನಾಲ್ಕು ಜನರು ಮುಖ್ಯೋಪಾಧ್ಯಾಯಿನಿ ಅವರನ್ನು ಭೇಟಿಯಾಗಿ ಸಿಸ್ಟರ್ ಪ್ರಭಾ ಅವರು ರವೀಂದ್ರನಾಥ್ ಠಾಗೋರ್ ಅವರ “ವರ್ಕ್ ಈಸ್ ವರ್ಶಿಪ್” ಕವನವನ್ನು ಕಲಿಸುತ್ತಿರುವ ಸಂದರ್ಭ ಹಿಂದೂ ಧರ್ಮ ಮತ್ತು ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ದೂರಿದರು. ಈ ವಿಚಾರವನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯೋಪಾಧ್ಯಾಯಿನಿ ಅವರಿಗೆ ನೀಡಿದ್ದರು. ವಿಚಾರಣೆ ನಡೆಸಿದಾಗ ಸಂಬಂಧಿತ ಶಿಕ್ಷಕಿ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ” ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

“ನಿಮ್ಮ ಅವಗಾಹನೆಗೆ ಆ ಕವನ ಇಲ್ಲಿದೆ.”

Work is Worship

Leave this chanting and singing

and telling of beads! Whom dost thou

worship in this lonely dark corner of a

temple with doors all shut? Open

thine eyes and see thy God is not before thee

He is there the tiller is tilling

the hard ground and where the path-maker

is breaking stones. He is with them

in sun and shower, and his

garment is covered with dust. Put off

thy holy mantle and even like him come

down on the dusty soil!

Deliverance? Where is this deliverance

to be found? Our master himself

has joyfully taken upon him the bonds of

creation; he is bound with us all forever.

Come out of thy meditations and

leave aside thy flowers and incense!

What harm is there if thy clothes

become tattered and stained? Meet

him and stand by him in toil and in

sweat of thy brow.

ಈ ಕವನವನ್ನು ಕಲಿಸುವಾಗ ಶಿಕ್ಷಕಿ ಈ ವಿವರಣೆ ನೀಡಿದ್ದರು:

  “ದೇವಸ್ಥಾನಗಳು, ಚರ್ಚುಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು. ದೇವರು ಮನುಷ್ಯರ ಹೃದಯಗಳಲ್ಲಿ ನೆಲೆಸಿದ್ದಾರೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು.

 ನಾವು ನಮ್ಮ ಕೆಲಸ ಮತ್ತು ಮನುಷ್ಯರನ್ನು ಗೌರವಿಸಬೇಕು ಹಾಗೂ ಅವರಲ್ಲಿ ದೇವರನ್ನು ಕಾಣಬೇಕು.

 ದೇವರು ಕಟ್ಟಡಗಳಲ್ಲಿ ಅಸ್ತಿತ್ವದಲ್ಲಿಲ್ಲ, ಬದಲು ಮನುಷ್ಯರ ಹೃದಯಗಳಲ್ಲಿದ್ದಾರೆ ಮತ್ತು ನಾವೆಲ್ಲರೂ ದೇವರ ದೇವಸ್ಥಾನಗಳು.”

ಯಾವುದೇ ದೇವರ ವಿರುದ್ಧ ತಾನು ಏನನ್ನೂ ಹೇಳಿಲ್ಲ, ಆದರೆ ಕವನದ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾಗಿ ಶಿಕ್ಷಕಿ ಹೇಳಿದ್ದಾರೆ. ತಾನು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿಲ್ಲವೆಂದೂ ಶಿಕ್ಷಕಿ ಹೇಳಿದ್ದಾರೆ. ಧ್ವನಿ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಸಿಸ್ಟರ್ ಪ್ರಭಾ ಅವರು ಹಿಂದೂ ಅಥವಾ ಯಾವುದೇ ಇತರ ಧರ್ಮ ಅಥವಾ ಪ್ರಧಾನಿ ಕುರಿತಂತೆ ಈ ಕವನವನ್ನು ವಿವರಿಸುವಾಗ ನಿಂದನಾತ್ಮಕ ಹೇಳಿಕೆಗಳನ್ನು ನೀಡಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

ಈ ಆಡಿಯೋ ಸಂದೇಶ ಸತ್ಯಕ್ಕೆ ದೂರವಾದುದು, ಅದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಯಾವುದೇ ಅಹಿತಕರ ಘಟನೆಯಿಂದ ರಕ್ಷಣೆ ಒದಗಿಸಬೇಕೆಂದು ಶಾಲಾ ಆಡಳಿತವು ಜಿಲ್ಲಾಡಳಿತವನ್ನು ಸಂಪರ್ಕಿಸಿತ್ತು. ವೈರಲ್ ಆದ ಮಹಿಳೆಯ ಆಡಿಯೋ ಕುರಿತಂತೆ ಕ್ರಮಕೈಗೊಳ್ಳುವಂತೆಯೂ ಪೊಲೀಸರಿಗೆ ದೂರು ನೀಡಲಾಗಿತ್ತು. ಫೆಬ್ರವರಿ 12ರಂದು ಶಿಕ್ಷಣ ಇಲಾಖೆ, ಬಿಇಒ ಕಚೇರಿಯ ವಿಷಯ ಪರಿವೀಕ್ಷಕ, ಡಿಡಿಪಿಐ ಕಚೇರಿಯ ಸಮನ್ವಯಕಾರರು, ಬಿಇಒ, ಇಸಿಒ ಮತ್ತು ಸಿಆರ್ಪಿ ಶಾಲೆಗೆ ಭೇಟಿ ನೀಡಿದಾಗ ಅವರ ವಿನಂತಿಯಂತೆ ವಾಸ್ತವಾಂಶವನ್ನು ವಿವರಿಸಲಾಯಿತು ಎಂದು ಮುಖ್ಯೋಪಾಧ್ಯಾಯಿನಿ ಮಾಹಿತಿ ನೀಡಿದ್ದಾರೆ.

ಈ ಘಟನೆ ನಂತರ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಹಿಂದುತ್ವ ಕಾರ್ಯಕರ್ತರ ಗುಂಪಿನೊಂದಿಗೆ ಆಗಮಿಸಿ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಉಪಸ್ಥಿತಿಯನ್ನು ಗಮನಿಸಿದ ಶಾಲಾಡಳಿತ, ಗೌರವಪೂರ್ವಕವಾಗಿ ಅವರನ್ನು ಶಾಲೆಯೊಳಗೆ ಆಹ್ವಾನಿಸಿದರೂ ಅವರು ಬರಲು ನಿರಾಕರಿಸಿ ಶಾಲೆ ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಿದರು. ಎಲ್ಲರಿಗಾಗಿನ ಶಾಸಕರೊಬ್ಬರು ತಮ್ಮ ಸುತ್ತ ಮಕ್ಕಳನ್ನು ಸೇರಿಸಿ ತಮ್ಮದೇ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಚೋದಿಸಿದ್ದು ಬೇಸರವಾಗಿದೆ. ಕವನವನ್ನು ಕಲಿಸುವಾಗ ತರಗತಿಯಲ್ಲಿಲ್ಲದ ವಿದ್ಯಾರ್ಥಿಗಳು, ಮತ್ತು ಇತರ ತರಗತಿಗಳ ವಿದ್ಯಾರ್ಥಿಗಳನ್ನೂ ಘೋಷಣೆಗಳನ್ನು ಕೂಗುವಂತೆ ಮಾಡಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಲೆಯ ಗೇಟಿನಲ್ಲಿ ಪ್ರತಿಭಟಿಸುತ್ತಿದ್ದ ಶಾಸಕರನ್ನು ಭೇಟಿಯಾಗುವಂತೆ ಬಿಇಒ ಮತ್ತು ಇತರ ಶಿಕ್ಷಣ ಇಲಾಖೆ ಆಧಿಕಾರಿಗಳು ನಮಗೆ ಹೇಳಿದರು. ನಾನು ಅವರನ್ನು ನಂತರ ಭೇಟಿಯಾದಾಗ, ಅವರು ಶಿಕ್ಷಕಿಯನ್ನು ತಕ್ಷಣ ಅಮಾನತುಗೊಳಿಸುವಂತೆ ಹೇಳಿದರಲ್ಲದೆ ಇಲ್ಲದೇ ಹೋದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಸಿದರು. ಶಿಕ್ಷಣ ಸಂಸ್ಥೆಯ ನಿಯಮಗಳಂತೆ ತನಿಖೆ ನಡೆಸದೆ ಶಿಕ್ಷಕಿಯನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ ಶಾಸಕರ ನೇತೃತ್ವದ ಗುಂಪು ಶಿಕ್ಷಕಿಯನ್ನು ತಕ್ಷಣ ಅಮಾನತುಗೊಳಿಸುವಂತೆ ನನ್ನನ್ನು ಬಲವಂತಪಡಿಸಿದರು. ಬೇರೆ ದಾರಿಯಿಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜಮಾಯಿಸಿದ ಜನರನ್ನು ಚದುರಿಸಲು ಸಿಸ್ಟರ್ ಪ್ರಭಾ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಹೇಳಿಕೆ ನೀಡುವುದು ನನಗೆ ಅನಿವಾರ್ಯವಾಯಿತು ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

ಸಿಸ್ಟರ್ ಪ್ರಭಾ ಅವರಿಗೆ ಶಿಕ್ಷಕ ವೃತ್ತಿಯಲ್ಲಿ ಒಟ್ಟು 16 ವರ್ಷಗಳ ಅನುಭವವಿದ್ದು, ಐದು ವರ್ಷಗಳಿಂದ ಜೆರೋಸಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯ ತನಕ ಆಕೆಯ ವಿರುದ್ಧ ಯಾವುದೇ ದೂರು ಇಲ್ಲ ಎಂದೂ ಅವರು ತಿಳಿಸಿದ್ದಾರೆ.


Spread the love