ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವ ತ್ಯಾಗಕ್ಕೂ ಸಿದ್ಧ – ವಿನಯ ಕುಮಾರ್ ಸೊರಕೆ

Spread the love

ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವ ತ್ಯಾಗಕ್ಕೂ ಸಿದ್ಧ – ವಿನಯ ಕುಮಾರ್ ಸೊರಕೆ

ಉಡುಪಿ :ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳು ಈ ದೇಶದ ಸಂವಿಧಾನವನ್ನು ಶಿಥಿಲಗೊಳಿಸುವಂತಹ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಸಂವಿಧಾನ ಶಿಥಿಲವಾದರೆ ದೇಶದ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರಿಗಳಿಗೆ ದಾರಿ ಮಾಡಿ ಕೊಡುತ್ತದೆ. ದೇಶದ ಬಡ ಜನತೆಯ ಬದುಕು ಛಿದ್ರವಾಗುತ್ತದೆ. ಅದನ್ನು ಆಗಲು ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಈ ದೇಶದ ಆತ್ಮವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ. ಮುಂಬರುವ ಪಂಚಾಯತ್ ಚುನಾವಣೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ. ದೇಶ, ರಾಜ್ಯದಲ್ಲಿ ಪ್ರಜಾಪ್ರಭುತ್ವವೇ? ಸರ್ವಾಧಿಕಾರವೇ ? ಎಂಬ ಪ್ರಶ್ನೆಗೆ ಉತ್ತರವನ್ನು ಕೊಡುತ್ತದೆ. ನಾವು ಪ್ರಜಾಪ್ರಭುತ್ವದ ಕಟ್ಟಕಡೆಯ ಸ್ತರವಾದ ಪಂಚಾಯತನ್ನು ಬಲ ಪಡಿಸಿದಲ್ಲಿ ಮಾತ್ರ ಈ ದೇಶ ಉಳಿಯ ಬಹುದು ಎಂದು ಸಚಿವರಾದ ವಿನಯ ಕುಮಾರ್ ಸೊರಕೆಯವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ 2 ದಿನ ಜರಗಿದ, ಉದ್ಯಾವರ ಗ್ರಾಮ ವ್ಯಾಪ್ತಿಯ 13 ಬೂತುಗಳ ಸಭೆಯಲ್ಲಿ ಭಾಗವಹಿಸಿ ನುಡಿದರು.

ಅವರು ಮುಂದುವರಿಯುತ್ತಾ ರಾಜ್ಯ ಸರಕಾರವಂತೂ ಕೊರೋನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಲಾಗದೆ ಸೋತಿದೆ. ಜನ ಆತಂಕದಿಂದ ಬದುಕುತ್ತಿದ್ದಾರೆ ಆದರೆ ಸರಕಾರ ಈ ರೋಗವನ್ನು ದಂಧೆಯನ್ನಾಗಿ ಪರಿವರ್ತಿಸಿಕೊಂಡು ದಿನವನ್ನು ಕಳೆಯುತ್ತಿದೆ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರವನ್ನು ಮಾಡಿದ ರಾಜ್ಯ ಸರಕಾರ ಅಭಿವೃದ್ಧಿಯ ದೂರದರ್ಶಿತ್ವ ಇಲ್ಲದೆ ಆಡಳಿತದಲ್ಲಿ ಸೋತಿದೆ ಎಂದರು.

ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳೂ ಉಡುಪಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರೂ ಆದ ನೀರೆ ಕೃಷ್ಣ ಶೆಟ್ಟಿಯವರು ಮಾತನಾಡಿ ನಾಡಿನ ಯುವ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಅದನ್ನು ಮತವನ್ನಾಗಿ ಪರಿವರ್ತಿಸಿ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಯಲ್ಲಿ ಸೋತಿದ್ದಾರೆ. ಕೇವಲ ಪ್ರಚಾರದ ಮೂಲಕ ‘ದೇವರಾದ’ ಅವರು ನಿಜಾರ್ಥದಲ್ಲಿ ಶೂನ್ಯರಾಗಿದ್ದಾರೆ. ಇದು ಈಗ ಜನಕ್ಕೆ ಅರ್ಥವಾಗುತ್ತಿದೆ. ಇದು ನೀಲಿ ಬಣ್ಣದಲ್ಲಿ ಬಿದ್ದ ನರಿಯೆಂದು. ಹಾಗಾಗಿ ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರವನ್ನು ಕೊಡುತ್ತಾರೆ. ಯುದ್ಧ, ಭಯೋತ್ಪಾದನೆ, ಹಿಂದುತ್ವ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಯಾವುದಕ್ಕೂ ಸರಿಯಾದ ನ್ಯಾಯ ಒದಗಿಸಿಲ್ಲ ಎಂದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಕಾರ್ಯಾಧ್ಯಕ್ಷರಾದ ಯು.ಆರ್. ಚಂದ್ರಶೇಖರ್, ಲೋರೆನ್ಸ್ ಡೇಸಾ, ಶಿವರಾಮ ಕುಂದರ್, ಉಪಾಧ್ಯಕ್ಷರಾದ ಚಂದ್ರಾವತಿ ಎಸ್. ಭಂಡಾರಿ, ಸುಗಂಧಿ ಶೇಖರ್, ಜ್ಯೋತಿ ಆನಂದ, ಕಾಯದರ್ಶಿಗಳಾದ ರಿಯಾಝ್ ಪಳ್ಳಿ, ಆಬಿದ್ ಆಲಿ, ಭಾಸ್ಕರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಪುಂಡರೀಶ್ ಕುಂದರ್, ಅನ್ಸಾರ್ ಸತ್ತಾರ್, ಲಕ್ಷಣ ಪೂಜಾರಿ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಹೆಲೆನ್ ಫೆರ್ನಾಂಡಿಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥೇಶ್ ಸುವರ್ಣ, ಎಸ್.ಸಿ. ಎಸ್.ಟಿ. ಘಟಕದ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ, ಕಿಸಾನ್ ಸೆಲ್ ಅಧ್ಯಕ್ಷರಾದ ಶೇಖರ ಕೆ. ಕೋಟ್ಯಾನ್, ಕಾಪು ಉತ್ತರ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚರಣ್ ವಿಠಲ್, ಇಂಟಕ್ ಅಧ್ಯಕ್ಷರಾದ ಉಮೇಶ್ ಕಾಂಚನ್, ಕೊಡಿಬೆಟ್ಟು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಂದೀಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.


Spread the love