ಸಮದ್ರ ತಡೆಗೋಡೆ ಕಾಮಗಾರಿಗೆ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ

Spread the love

ಉಡುಪಿ: ತೆಂಕ ಎರ್ಮಾಳ್ ಮತ್ತು ಬಡಾ ಎರ್ಮಾಳ್ ಪ್ರದೇಶದಲ್ಲಿ ತಲಾ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಂಗಳವಾರ ಚಾಲನೆ ನೀಡಿದರು.

bada-sorake-20160518

ನಂತರ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಲಕ್ಷದ ಮೊತ್ತದ ರಸ್ತೆ ಕಾಂಕ್ರೀಟೀಕರಣ, ಬಡಾ ಉಚ್ಚಿಲದಲ್ಲಿ 10 ಲಕ್ಷ ರೂ ಮೊತ್ತದ ಕಚ್ಛಾರಸ್ತೆ ಡಾಮರೀಕರಣ, ತೆಂಕ ಗ್ರಾ,ಪಂ. ನಲ್ಲಿ 12 ಲಕ್ಷ ಮೊತ್ತದ ರಸ್ತೆ ಅಭಿವೃದ್ಧಿ, 6 ಲಕ್ಷ ಮೊತ್ತದ ಎಲ್ಲೂರು ಪೊಂದಾಡು ಹರಿಜನ ಕಾಲನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ಪೊಂದಾಡು ಎಸ್.ಸಿ. ಕಾಲನಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಸೇರಿದಂತೆ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.39 ಕೋಟಿ ಮೊತ್ತದ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಈ ಸಂದರ್ಭದಲ್ಲಿ ತೆಂಕ ಗ್ರಾ.ಪಂ. ಅಧ್ಯಕ್ಷ ಅರುಣ ಕುಮಾರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರತ್ನ ಕರ್ಕೆರಾ, ಉಪಾಧ್ಯಕ್ಷ ಇಂದಿರಾಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಕೇಶವ , ಶೇಖಬ್ಬಾ ಹಾಗೂ ಪಂಚಾಯತ್ ನ ಸದಸ್ಯರು ಹಾಜರಿದ್ದರು.

tenka-sorake-20160518

ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ , 15 ಲಕ್ಷ ಮೊತ್ತದ ಎಲ್ಲೂರಿನ ಬಂಡಸಾಲೆ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಶಿಲಾನ್ಯಾಸ , 6 ಲಕ್ಷ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಬೆಳಪು- ಸಚಿವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬೆಳಪು ಗ್ರಾಮ ಪಂಚಾಯತ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಂಗಳವಾರ ಚಾಲನೆ ನೀಡಿದರು.

belapu-sorake-20160518

15 ಲಕ್ಷ ರೂ ಮೊತ್ತದ ಪರಿಶಿಷ್ಠ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 12 ಲಕ್ಷ ರೂ ಮೊತ್ತದ ಅಂಬೇಡ್ಕರ್ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 10 ಲಕ್ಷ ಮೊತ್ತದ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ಪ.ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ರಸ್ತೆ ಸೇರಿದಂತೆ ಒಟ್ಟು 47 ಲಕ್ಷ ರೂ ಮೊತ್ತದ ಕಾಮಗಾರಿಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ , ಉಪಾಧ್ಯಕ್ಷ ಶೋಭಾ ಭಟ್, ಪಂಚಾಯತ್ ನ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love