ಸಾಧಕ ಶಿಕ್ಷಕರಿಗೆ ಶಾಸಕ ರಘುಪತಿ ಭಟ್ ಅವರಿಂದ ಅಭಿನಂದನೆ

Spread the love

ಸಾಧಕ ಶಿಕ್ಷಕರಿಗೆ ಶಾಸಕ ರಘುಪತಿ ಭಟ್ ಅವರಿಂದ ಅಭಿನಂದನೆ

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ಶಿಕ್ಷಕರು ಹಾಗೂ ಸಾಧನೆ ಪ್ರಶಸ್ತಿಯನ್ನು ಡಿಸೆಂಬರ್ 20ರಂದು ಪ್ರದಾನ ಮಾಡಲಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ಶಿಕ್ಷಕರು ಹಾಗೂ ಸಾಧನೆ ಪ್ರಶಸ್ತಿಯನ್ನು ರಘುಪತಿ ಭಟ್ ಅವರು ಈ ಹಿಂದೆ 2004ರಲ್ಲಿ ಶಾಸಕರಾಗಿದ್ದ ಸಂದರ್ಭ ಪ್ರಾರಂಭಿಸಿ ಸಾಧಕ ಶಿಕ್ಷಕ, ಸಾಧಕ ಶಾಲೆಯನ್ನು ಗುರುತಿಸಿ ಅಭಿನಂದಿಸುತ್ತ ಬಂದಿರುತ್ತಾರೆ. ತದನಂತರ ಕಳೆದ ಐದು ವರ್ಷಗಳಿಂದ ಇದು ನಿಲುಗಡೆ ಗೊಂಡಿದ್ದು ಈಗ ಪುನಃ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ವಿಧಾನ ಪುನರ್ ಪ್ರಾರಂಭಿಸಿದ್ದು, ನಾಳೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ಸಾಧಕ ಶಿಕ್ಷಕರಾಗಿ ಮತ್ತು ಗುರುತಿಸಿ ಪ್ರಶಸ್ತಿ ಪಡೆಯುತ್ತಿರುವ ಶಿಕ್ಷಕರಿಗೆ ಹಾಗೂ ಶಾಲೆಗಳಿಗೆ ಶಾಸಕರು ಅಭಿನಂದಿಸಿದ್ದಾರೆ ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ


Spread the love