ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಮೂವರ ಬಂಧನ

Spread the love

ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಮೂವರ ಬಂಧನ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಮೂವರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ನಾಲ್ಕೂರು ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ಮುದ್ದೂರು ನಾಲ್ಕೂರು ನಿವಾಸಿ ಅರಣ್ ಶೆಟ್ಟಿ (40), ಹರೇಶ್ (23) ಮತ್ತು ವಿಜಯ (21) ಎಂದು ಗುರುತಿಸಲಾಗಿದೆ.

ಜನವರಿ 12ರಂದು ಸೀತಾರಾಮ ಪಿ. ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ದೊರೆತ ವರ್ತಮಾನದ ಮೇರೆಗೆ ಉಡುಪಿ ತಾಲೂಕು, ನಾಲ್ಕೂರು ಗ್ರಾಮದ ನಾಲ್ಕೂರು ಪೇಟೆಯ, ಸಮೂದಾಯ ಭವನದ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ ಎಂಬ ಜೂಜಾಟ ನಡೆಯುತ್ತಿದ್ದಲ್ಲಿಗೆ 00:30 ಗಂಟೆಗೆ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿಗೊಳಿಸಿ, ಆರೋಪಿಗಳಿಂದ ಜೂಜಾಟದಲ್ಲಿ ಸಂಗ್ರಹಿಸಿದ ಹಣ ಒಟ್ಟು ರೂಪಾಯಿ 12,180/-, ಜೂಜಾಟಕ್ಕೆ ಬಳಸಿದ ಸ್ಥಳದಲ್ಲಿ ಸಿಕ್ಕಿದ ಗರಗರಮಂಡಲದ ಚಾರ್ಟ್, ಗರಗರ ಮಂಡಲದ ಕಾಯಿಗಳು-3, ಕಾಯಿಯನ್ನು ಅಲ್ಲಾಡಿಸಿ ಆಟವಾಡಲು ಉಪಯೋಗಿಸಿದ ಕಬ್ಬಿಣದ ಡಬ್ಬ-1, ಅರ್ಧ ಉರಿದ ಕ್ಯಾಂಡಲ್-1 ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love