ಸುದ್ದಿಯ ಪರಿಪೂರ್ಣತೆಗೆ ಛಾಯಾಚಿತ್ರ ಪೂರಕ – ಪತ್ರಕರ್ತ ಕಿರಣ್ ಮಂಜನ ಬೈಲ್

Spread the love

ಸುದ್ದಿಯ ಪರಿಪೂರ್ಣತೆಗೆ ಛಾಯಾಚಿತ್ರ ಪೂರಕ – ಪತ್ರಕರ್ತ ಕಿರಣ್ ಮಂಜನ ಬೈಲ್

ಉಡುಪಿ: ಪತ್ರಕರ್ತರಿಗೂ ಛಾಯಾಗ್ರಾಕರಿಗೂ ಅವಿನಾಭಾವ ಸಂಬಂಧವಿದೆ. ಸುದ್ದಿಯೊಂದು ಓದುಗನಿಗೆ ಪೂರ್ಣ ಮನವರಿಕೆಯಾಗಲು ಸುದ್ದಿಯೊಂದಿಗೆ ಛಾಯಾಚಿತ್ರ ಪೂರಕ. ಕೆಲವು ಬಾರಿ ಒಂದು ಚಿತ್ರ ಸುದ್ದಿಯನ್ನು ಹೇಳಬಲ್ಲುದು. ಆ ಶಕ್ತಿ ಛಾಯಾಚಿತ್ರಕ್ಕಿದೆ ಎಂದು ಹಿರಿಯ ಪತ್ರಕರ್ತ ಕಿರಣ್ ಮಂಜನ ಬೈಲ್ ಅಭಿಪ್ರಾಯ ಪಟ್ಟರು.

ಅವರು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಷಿಯೇಷನ್ ಉಡುಪಿ ವಲಯದಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮಂಗಳವಾರದಂದು ಕೊಡಮಾಡಿದ “ಮಾಧ್ಯಮ ಮಾಣಿಕ್ಯ” ಬಿರುದಿನೊಂದಿಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ವಲಯ ಗೌರವಾಧ್ಯಕ್ಷ ಶಿವ ಕೆ. ಅಮೀನ್, ಕೇಂದ್ರ ಸಮಿತಿಯ ಸುಂದರ್ ಪೂಜಾರಿ, ಜಯಕರ ಸುವರ್ಣ, ನಿಕಟ ಪೂರ್ವ ವಲಯಾಧ್ಯಕ್ಷ ಅನೀಶ್ ಶೆಟ್ಟಿಗಾರ್, ಸುರಭಿ ಸುಧೀರ್, ಕೃಪಾ ಕಿರಣ್ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಜನಾರ್ದನ್ ಕೊಡವೂರು ನಿರೂಪಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ವಂದಿಸಿದರು.


Spread the love