ಸುಬಾಶ್ಚಂದ್ರ ವಾಗ್ಳೆ ಮತ್ತು ನವೀನ್ ಇನ್ನಾರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ ಪ್ರದಾನ

Spread the love

ಸುಬಾಶ್ಚಂದ್ರ ವಾಗ್ಳೆ ಮತ್ತು ನವೀನ್ ಇನ್ನಾರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ ಪ್ರದಾನ

ಉಡುಪಿ: ಸಮಾಜದ ಅಂಕುಡೊಂಕುಗಳ ಬಗ್ಗೆ ನಿಷ್ಪಕ್ಷಪಾತವಾಗಿ ವರದಿ ಮಾಡುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸುವುದು ಅಗತ್ಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಬ್ರಹ್ಮಗಿರಿಯ ಪ್ರಗತಿಸೌಧದಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಜಿಲ್ಲಾ ಘಟಕ ವತಿಯಿಂದ ಕೊಡಮಾಡುವ ರಾಜೇಶ್ ಶಿಬಾಜೆ ಪ್ರಶಸ್ತಿಯನ್ನು ಪತ್ರಕರ್ತರಾದ ಸುಬಾಶ್ಚಂದ್ರ ವಾಗ್ಳೆ ಮತ್ತು ನವೀನ್ ಕೆ ಇನ್ನಾ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಮಾತನಾಡಿ ಪತ್ರಿಕೋದ್ಯಮ ಕಲಿಕೆಗೆ ವಿದ್ಯಾರ್ಥಿಗಳ ಕೊರತೆಯಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಿಗೆ ಮಾಧ್ಯಮ ಸಮ್ಮಾನ್ ಹಾಗೂ ಯುವ ಪತ್ರಕರ್ತರಿಗೆ ಯುವ ಮಾಧ್ಯಮರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಾದವೈಭವಂ ಇದರ ವಾಸುದೇವ ಭಟ್, ಪತ್ರಕರ್ತರ ವೇದಿಕೆ ಇದರ ಶೇಖರ್ ಅಜೆಕಾರು, ಡಾ ಜಿ ಶಂಕರ್ ಸರ್ಕಾರಿ ಮಹೀಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ ಜಗದೀಶ್ ರಾವ್, ಉದ್ಯಮಿ ಬಿಜಿ ಮೋಹನ್ ದಾಸ್, ವಿಶ್ವನಾಥ್ ಶಿಬಾಜೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love