ಸುರತ್ಕಲ್ ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕೆ ಮಸಿ

Spread the love

ಸುರತ್ಕಲ್ ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕೆ ಮಸಿ

ಮಂಗಳೂರು: ಸುರತ್ಕಲ್ ಸರಕಾರಿ ಆಸ್ಪತ್ರೆ ಸಮೀಪ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಕಿಡಿಗೇಡಿಗಳು ಕರಿ ಆಯಿಲ್ ಬಳಿದು ಪರಾರಿಯಾಗಿದ್ದಾರೆ.

ಕ್ಯಾಂಟೀನ್‌ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಒಂದು ಗೋಡೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರ ಇರುವ ಕಲ್ಲನ್ನು ಅಳವಡಿಸಲಾಗಿತ್ತು. ಇದೇ ಜಾಗಕ್ಕೆ ಕರಿ ಆಯಿಲ್ ಬಳಿಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶುಚಿಗೊಳಿಸಿದ್ದಾರೆ.

ಮಂಗಳೂರು ಪೊಲೀಸ್ ಡಿಸಿಪಿ ಹನುಮಂತರಾಯ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


Spread the love