ಸುರತ್ಕಲ್: ನವಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ

Spread the love

ಸುರತ್ಕಲ್: ನವಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ

ಸುರತ್ಕಲ್: ಮಣಿಕೃಷ್ಣಸ್ವಾಮಿ ಅಕಾಡಮಿ (ರಿ.) ಹಾಗೂ ಗೋವಿಂದದಾಸ ಕಾಲೇಜಿನ ಲಲಿತ ಕಲೆ ಮತ್ತು ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸುರತ್ಕಲ್‍ನ ಗೋವಿಂದದಾಸ ಕಾಲೇಜಿನಲ್ಲಿ ನವಂಬರ್ 1ರಂದು ಸಂಜೆ ಗಂ 5.30ಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪ್ರಸಿದ್ಧ ಕಲಾವಿದೆ ಸಂಗೀತ ಬಾಲಚಂದ್ರ ಇವರಿಂದ ಶಾಸ್ತ್ರೀಯ ಸಂಗೀತ ಬಾಲಚಂದ ್ರಇವರಿಂದ ಶಾಸ್ತ್ರೀಯ ಸಂಗೀತ ರಾಗಾಧಾರಿತ ಚಲನ ಚಿತ್ರ ಹಾಡುಗಳ, ಭಾವಗೀತೆ ಹಾಗೂ ದಾಸರ ಪದಗಳ ಪ್ರಸ್ತುತ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಯಶವಂತ ಆಚಾರ್ಯ ಸಹಗಾಯಕರಾಗಿ, ಗುರುರಾಜ ಎಂ ಬಿ ಕೀಬೋರ್ಡ್‍ನಲ್ಲಿ, ನವೀನ್ ಬೋಂದೇಲ್ ರಿದಂ ಪ್ಯಾಡ್‍ನಲ್ಲಿ ಹಾಗೂ ವೀಕ್ಷಿತ್ ಕೊಡಂಚ ತಬ್ಲಾದಲ್ಲಿ ಸಹಕರಿಸಲಿರುವರು.

ಸುರತ್ಕಲ್‍ನ ನಾಗರಿಕಾ ಸಲಹಾ ಸಮಿತಿ ಅಧ್ಯಕ್ಷರಾದ ಜೆ ಡಿ ವೀರಪ್ಪಅವರು ಮುಖ್ಯ ಅತಿಥಿಗಳಾಗಿದ್ದು ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.


Spread the love