ಸುರತ್ಕಲ್ ಯುವಕನ ಕೊಲೆ ಪ್ರಕರಣ – ಮತ್ತೆ ಐವರು ಪೊಲೀಸ್ ವಶಕ್ಕೆ

Spread the love

ಸುರತ್ಕಲ್ ಯುವಕನ ಕೊಲೆ ಪ್ರಕರಣ – ಮತ್ತೆ ಐವರು ಪೊಲೀಸ್ ವಶಕ್ಕೆ

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಾರ್ ವೊಂದರಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಮನೋಜ್ ಯಾನೆ ಮನು (40), ಶರತ್ ಯಾನೆ ಮುನ್ನಾ(35), ಪ್ರವೀಣ್ ಕುಂದರ್ (42), ದೀಪಕ್ ರಾಜ್ (33) ಮತ್ತು ಮಿಥುನ್ ಎಂದ ಗುರುತಿಸಲಾಗಿದೆ. ಘಟನೆ ನಡೆದ ಮರುದಿನ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಮಂಗಳೂರು ಹೊರವಲಯದ ಸುರತ್ಕಲ್ ಬಾರ್ ನಲ್ಲಿ ಗುಡ್ಡೆ ಕೊಪ್ಪದ ಸಂದೇಶ್( 30) ಎಂಬಾತನನ್ನು ನವೆಂಬರ್ 29ರಂದು ಕೊಲೆ ಮಾಡಲಾಗಿತ್ತು. ಸಂದೇಶ್ ಹಾಗೂ ಕೆಲ ಸ್ನೇಹಿತರು ನವೆಂಬರ್ 29 ರ ರಾತ್ರಿ 11 ಗಂಟೆಗೆ ಬಾರ್ಗೆ ಹೋಗಿದ್ದರು. ಮದ್ಯದ ಅಮಲಿನಲ್ಲಿದ್ದಾಗ ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಹೊಡೆದಾಡಿಕೊಂಡಿದ್ದರು. ಈ ವೇಳೆ ಗೆಳೆಯನೊಬ್ಬ ಮಾರಕಾಸ್ತ್ರದಿಂದ ಸಂದೇಶ್ ಎದೆಗೆ ಇರಿದಿದ್ದಾನೆ. ಪರಿಣಾಮ ಆತ ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದನು.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love