ಸುರತ್ಕಲ್ : 2.50 ಕೋಟಿ ಶೂನ್ಯ ಬಡ್ಡಿದರ ಸಾಲದ ಚೆಕ್ ವಿತರಣೆ

Spread the love

ಸುರತ್ಕಲ್ : 2.50 ಕೋಟಿ ಶೂನ್ಯ ಬಡ್ಡಿದರ ಸಾಲದ ಚೆಕ್ ವಿತರಣೆ

ಸುರತ್ಕಲ್ : ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸುರತ್ಕಲ್ ಶಾಖೆಯಿಂದ ಮಂಜೂರುಗೊಂಡ ಮಹಿಳಾ ಮೀನುಗಾರರ ಸ್ವಸಹಾಯ ಗುಂಪುಗಳ ಶೂನ್ಯ ಬಡ್ಡಿದರದ ಸಾಲ ಯೋಜನೆಯ 2.50 ಕೋಟಿ ಮೊತ್ತದ ಚೆಕ್ ಗಳ ವಿತರಣಾ ಸಮಾರಂಭವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ| ವೈ ಭರತ್ ಶೆಟ್ಟಿ ಉದ್ಘಾಟಿಸಿ ಚೆಕ್‍ಗಳನ್ನು ವಿತರಿಸಿದರು.

ಚಿತ್ರಾಪುರ ಕುಳಾಯಿಯ ಸುವರ್ಣ ಮಂದಿರದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಶಾಸಕರು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಮಹಿಳಾ ಮೀನುಗಾರರಿಗೆ ಆರ್ಥಿಕಶಕ್ತಿ ತುಂಬಲು ಕಾರ್ಯಪ್ರವೃತ್ತವಾಗಿರುವ ಬ್ಯಾಂಕಿನ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭ ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‍ಪಾಲ್ ಸುವರ್ಣ ಸ್ವಾಗತಿಸಿ, ಶೀಘ್ರದಲ್ಲಿಯೇ ಬ್ಯಾಂಕಿನ ಎಲ್ಲಾ ಶಾಖೆಗಳ ಗ್ರಾಹಕರಿಗೆ ಎಟಿಎಂ ಸೌಲಭ್ಯ ಆರಂಭಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುಕ್ಕಾ ವಾರ್ಡಿನ ಶ್ರೀಮತಿ ಶೋಭಾ ರಾಜೇಶ್, ಇಡ್ಯಾ ಪಶ್ಚಿಮ ವಾರ್ಡಿನ ನಯನ, ಕುಳಾಯಿ 9ನೇ ವಾರ್ಡಿನ ಶ್ರೀಮತಿ ವೇದಾವತಿ,ಕುಳಾಯಿ 10 ನೇ ವಾರ್ಡಿನ ಸುಮಿತ್ರ ಕರಿಯ, ಮಾಜಿ ಮೇಯರ್ ಶ್ರೀ ಗಣೇಶ್ ಹೊಸಬೆಟ್ಟು, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ವಿನಯ ಕರ್ಕೇರ, ಬೈಕಂಪಾಡಿ ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀ ವಸಂತ ಅಮೀನ್, ಕೋಡಿಕಲ್ ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀ ಸೋಮನಾಥ ಪಾಂಗಾಳ್, ತಣ್ಣೀರುಬಾವಿ ಮೊಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀ ಲೀಲಾಧರ ಕರ್ಕೇರ, ಕೂಳೂರು ಕುಳಾಯಿ ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್, ಪಣಂಬೂರು ಮೊಗವೀರ ಮಹಾಸಭಾದ ಕಾರ್ಯದರ್ಶಿ ಶ್ರೀ ನಾಗೇಶ್ ಪುತ್ರನ್, ಶ್ರೀ ವರುಣ್ ಚೌಟ, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಮಾಧವ ಸುವರ್ಣ, ಬ್ಯಾಂಕಿನ ನಿರ್ದೇಶÀಕರುಗಳಾದ ಶ್ರೀಮತಿ ವನಜ ಎಚ್. ಕಿದಿಯೂರು, ಶ್ರೀ ವನಜ ಜೆ ಪುತ್ರನ್, ಶ್ರೀ ರಾಮದಾಸ್ ಶ್ರೀಯಾನ್, ಶ್ರೀ ಶಿವರಾಮ ಕುಂದರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬ್ಯಾಂಕಿನ ವತಿಯಿಂದ ಶಾಸಕರು ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ 4 ಸದಸ್ಯರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕರಾದ ಶ್ರೀ ಶೋಭೇಂದ್ರ ಸಸಿಹಿತ್ಲು ವಂದಿಸಿ, ಸಿಬ್ಬಂದಿ ಶ್ರೀಮತಿ ವಿಜೇತ ಶೆಟ್ಟಿ ನಿರೂಪಿಸಿದರು.


Spread the love