ಸೌದಿಯ ತಾಯಿಫಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ

Spread the love

ಸೌದಿಯ ತಾಯಿಫಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ

ಇತ್ತೀಚಿಗೆ ನಮ್ಮನ್ನಗಲಿದ ಕರ್ನಾಟಕದ ಹಿರಿಯ ವಿದ್ವಾಂಶ ಹಾಗು ಸಮಸ್ತದ ಕೇರಳ ಜಂಇಯ್ಯತುಲ್ ಉಲೇಮಾದ ಉಪಾಧ್ಯಕ್ಷರಾದ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದರವರ ಅನುಸ್ಮರಣೆ ಹಾಗು ಮಯ್ಯತ್ ನಮಾಝ್, ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ 10 ಜನವರಿ 2019 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಕರ್ನಾಟಕ SKSSF ತಾಯೀಫ್ ಸಮಿತಿಯ ಅಧ್ಯಕ್ಷರಾದ ಹುಸೈನ್ ದಾರಿಮಿ ಕಬಕ ಇವರ ನೇತೃತ್ವದಲ್ಲಿ ಸೌದಿ ಅರೇಬಿಯಾದ ತಾಯಿಫ್ (ಬುಖಾರಿಯ) ದಲ್ಲಿರುವ :ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಇದರ ಕಚೇರಿಯಲ್ಲಿ ನಡೆಯಿತು.

ಸಮಸ್ತ ಇಸ್ಲಾಮಿಕ್ ಸೆಂಟರ್ ತಾಯೀಫ್ ಸಮಿತಿ ಅಧ್ಯಕ್ಷರಾದ ಷರೀಫ್ ಫೈಝಿ, ಸುನ್ನಿ ಯುವಜನ ಸಂಘದ ಉಪಾಧ್ಯಕ್ಷರಾದ ಅನ್ವಾರಿ ಉಸ್ತಾದ್ ಮತ್ತು ಅಬ್ದುಲ್ ರಹಿಮಾನ್ ಉಸ್ತಾದ್ ಅನುಸ್ಮರಣ ಭಾಷಣಗೈದರು. ಕರ್ನಾಟಕ SKSSF ತಾಯೀಫ್ ಸಮಿತಿಯ ಉಪಾಧ್ಯಕ್ಷರಾದ ಮಾಹಿನ್ ಅಸೈಗೋಳಿ,,ಕರ್ನಾಟಕ SKSSF ತಾಯೀಫ್ ಸಮಿತಿಯ ಸಂಚಾಲಕರಾದ ಪವಾಜ್ ಬಾಯರ್, ಕರ್ನಾಟಕ SKSSF ತಾಯೀಫ್ ಸಮಿತಿಯ ಕೋಶಾಧಿಕಾರಿ ಹನೀಫ್ ಬಂದ್ಯೋಡು ಮತ್ತು ಸಮಸ್ತ ಸಂಘಟನೆಗಳ ಮುಂದಾಳು ಆರಿಫ್ ಅಲಿಯವರು ಮುಖ್ಯ ಅತಿಥಿಗಳಾಗಿದ್ದರು.

ಇದೆ ಸಂದರ್ಭದಲ್ಲಿ ಪ್ರವಾಸ ಜೀವನಕ್ಕೆ ವಿರಾಮ ಹಾಕಿ ತಾಯ್ನಾಡಿಗೆ ಮರಳುತ್ತಿರುವ ಕರ್ನಾಟಕ SKSSF ತಾಯೀಫ್ ಕಮೀಟಿಯ ಮಾಜಿ ಕಾರ್ಯದರ್ಶಿ ಅರಿಫ್ ಅಲಿ ಅವರಿಗೆ ಹಾಗೂ ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಇದರ ಸಕ್ರೀಯ ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಹಾಗು ಜಮಾಲ್ ರವರಿಗೆ ನಮ್ಮ ಕಮೀಟಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜನವರಿ 26 ಕ್ಕೆ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಮಾನವ ಸರಪಳಿಯ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಕರ್ನಾಟಕ SKSSF ತಾಯೀಫ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಟಿ ಎಂ ಕೊಡಂಗಾಯಿ ಕಾರ್ಯಕ್ರಮ ಸಂಯೋಜಿಸಿದರು.


Spread the love