ಸೌಹಾರ್ದ ದೀಪಾವಳಿ ಸ್ಪರ್ಧೆ ಮುಂದೂಡಿಕೆ – ಐವನ್ ಡಿಸೋಜಾ 

Spread the love

ಸೌಹಾರ್ದ ದೀಪಾವಳಿ ಸ್ಪರ್ಧೆ ಮುಂದೂಡಿಕೆ – ಐವನ್ ಡಿಸೋಜಾ 

ಮಂಗಳೂರು : ಅಕ್ಟೋಬರ್ 23 ರಂದು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸೌಹಾರ್ದ ದೀಪಾವಳಿ ಸಂಭ್ರಮಾಚರಣೆಗೆ ಭಾಷಣ ಸ್ಪರ್ಧೆ, ಗೂಡುದೀಪ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಫಲಾನುಭವಿಗಳಿಗೆ ಅಕ್ಕಿವಿತರಣೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ಅಕ್ಟೋಬರ್ 20 ರಂದು ಮಹಾನಗರಪಾಲಿಕೆ ಚುನಾವಣೆ ನಡೆಯುತ್ತಿರುವುರಿಂದ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಡಿಸೆಂಬರ್ 16 ರಂದು ನಗರದ ಟೌನ್ ಹಾಲ್‍ನಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ಜಂಟಿಯಾಗಿ ಆಚರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ  ಕಚೇರಿ ಪ್ರಕಟಣೆ ತಿಳಿಸಿದೆ.


Spread the love