ಹರಿಶೇಖರನ್ ವರ್ಗ; ಹೇಮಂತ್ ನಿಂಬಾಳ್ಕರ್ ನೂತನ ಪಶ್ಚಿಮ ವಲಯ ಐಜಿಪಿಯಾಗಿ ನೇಮಕ

Spread the love

ಹರಿಶೇಖರನ್ ವರ್ಗ; ಹೇಮಂತ್ ನಿಂಬಾಳ್ಕರ್ ನೂತನ ಪಶ್ಚಿಮ ವಲಯ ಐಜಿಪಿಯಾಗಿ ನೇಮಕ

ಮಂಗಳೂರು: ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಸೇರಿದಂತೆ ಐವರು ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪಶ್ಚಿಮ ವಲಯದ ಐಜಿಪಿ ಆಗಿದ್ದ ಪಿ ಹರಿಶೇಖರನ್ ಅವರಿಗೆ ಕೇಂದ್ರ ಕಚೇರಿ ಬೆಂಗಳೂರು ಇದರ ಐಜಿಪಿಯಾಗಿ ವರ್ಗಾವಣೆಗೊಳಿಸಿದ್ದು ಹೊಸ ಪಶ್ಚಿಮ ವಲಯ ಐಜಿಪಿಯಾಗಿ ಎಂ ಹೆಮಂತ್ ನಿಂಬಾಳ್ಕರ್ ಅವರನ್ನು ನೇಮಿಸಿದೆ.

ಅಲ್ಲದೆ ಬಿಜಯ್ ಕುಮಾರ್ ಸಿಂಗ್ ಅವರನ್ನು ಗುಪ್ತಚರ ದಳದ ಐಜಿಪಿಯಾಗಿ, ಪಿ ರವಿ ಅವರನ್ನು ಕೆ ಎಸ್ ಆರ್ ಟಿಸಿ ಬೆಂಗಳೂರಿನ ಭದ್ರತೆ ಮತ್ತು ವಿಚಕ್ಷಣ ದಳದ ಐಜಿಪಿ ಹಾಗೂ ನಿರ್ದೇಶಕರಾಗಿ, ಎನ್ ಸತೀಶ್ ಕುಮಾರ್ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಡಿಐಜಿಪಿ ಹಾಗೂ ಜಂಟಿ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.


Spread the love